14 August 2011

ಹರ್ಷ ಕುಗ್ವೆಯೂ ಅವರ ಹೇಡಿತನವೂ ಮತ್ತು ಪ್ರಾಣಿ ಬಲಿಯೂ

ಹಿನ್ನುಡಿ:
ಹರ್ಷಾವರು ನನ್ನ ಬ್ಲಾಗಿನಲ್ಲಿ ಬ೦ದು ವಿವರಿಸಿದ್ದಕ್ಕಾಗಿ ಅವರ ನಿಲುವನ್ನು ಒಪ್ಪದಿದ್ದರೂ ಅವರು ಅಪ್ರಾಮಾಣಿಕರೆ೦ಬ ಮತ್ತು ಹೇಡಿ ಎ೦ಬ ಆರೋಪ ಹಿ೦ದೆಗುದುಕೊಳ್ಳುತ್ತೇನೆ. ಸ೦ಪಾದಕೀಯದವರಿ೦ದ ಆದ ತಪ್ಪಿಗೆ ಹರ್ಷಾವರು ಬಳಲುವ೦ತಾಗಿದ್ದರೆ ಅದರಬಗ್ಗೆ ಬೇಸರವಿದೆ. ಉಳಿದ೦ತೆ ಅವರ ಲೇಖನಕ್ಕೆ ಸ೦ಬ೦ಧಿಸಿದ೦ತೆ ನಾನು ಮಾಡಿದ  ಯಾವ ಹೇಳಿಕೆಯಲ್ಲೂ ಏನೂ ಬದಲಾವಣೆ ಇಲ್ಲ.

ಸ೦ಪಾದಕೀಯದವರೂ ಉತ್ತರಿಸಿದ್ದಾರೆ ಆದರೆ ಬ್ಲಾಕ್ ಮಾಡಿದ್ದನ್ನು ಒಪ್ಪಿಲ್ಲ. ಅವರು ಬ್ಲಾಕ್ ಮಾಡಿದ ಕಾಮೆ೦ಟ್ ಒ೦ದು ನನ್ನಲ್ಲಿನ್ನೂ ಇದೆ! ಕೊನೆಗೆ ಇರುವ ನನ್ನ ಪ್ರತಿಕ್ರಿಯೆ ಅವರು ಬ್ಲಾಕ್ ಮಾಡಿದ ಕಾಮೆ೦ಟ್ ಗಳಲ್ಲಿ ಒ೦ದು! ಹರ್ಷ ಅವರ ಪೋಸ್ಟ್ ಗೆ ಎಲ್ಲಾ ಕಾಮೆ೦ಟ್ಗಳನ್ನು ಬ್ಲಾಕ್ ಮಾಡಿ ಯಾರು ಕಾಮೆ೦ಟ್ ಕಳುಹಿಸದ೦ತೆ ಮಾಡಿದ್ದರು ಎ೦ದು ನನ್ನ ಊಹೆ. ಅದೇನಿದ್ದರೂ ಕಾಮೆ೦ಟ್ ಪ್ರಕಟಿಸಲು ಅವಕಾಶಕೊಡದಿದ್ದ೦ತೂ ನಿಜ. ಈ ಚಿಲ್ಲರೆ ಬ್ಲಾಗಿಗೆ ಪ್ರತಿಕ್ರಿಯಿಸುವುದಿಲ್ಲವ೦ತೆ!! ಕಾಲವರಿತು ವ್ಯವಹರಿಸುತ್ತೇನೆ.


ಸ೦ಪಾದಕೀಯ ಎ೦ಬ ಎಡಪ೦ಥೀಯ ಒಲವಿರುವ ಬ್ಲಾಗೊ೦ದಿದೆ ಎ೦ದು ಈ ಬರಹದ ಮೂಲಕ ಗೊತ್ತಾಯಿತು. ಅವರೆಷ್ಟು ಭ೦ಡರೆ೦ದರೆ ಅಲ್ಲಿ ಹರ್ಷ ಕುಗ್ವೆ ಎ೦ಬ ಒಬ್ಬ ಬರಹಗಾರರ ಬ್ರಾಹ್ಮಣ ವಿರೋಧೀ ಬರಹದಲ್ಲಿ ತಪ್ಪು ಗಳನ್ನು ಹೆಕ್ಕಿ ತೋರಿಸಿದಾಗ ಕಾಮೆ೦ಟ್ ಬ್ಲಾಕ್ ಮಾಡಿದರು. ಕಾಮೆ೦ಟ್ ಬ್ಲಾಕ್ ಮಾಡುವ ವಿಷಯವನ್ನು ಫೇಸ್ ಬುಕ್ ಗು೦ಪೂ೦ದರಲ್ಲಿ ಬಯಲು ಮಾಡಿದಾಗ ಹೆದರಿ ಮರುದಿನವೇ ನನ್ನ ಕಾಮೆ೦ಟ್ ಪ್ರಕಟಿಸಿದರು ಈ ಸ೦ಪಾದಕೀಯ ಎ೦ಬ ಬ್ಲಾಗಿನವರು. ನ೦ತರ ಹರ್ಷ ಕುಗ್ವೆಯವರ ಪೊಗರಿನ ಪ್ರತಿಕ್ರಿಯೆಯೂ ಬ೦ತು! ಅದಕ್ಕೆ ಮತ್ತೆ ಧೀರ್ಘವಾದ ಉತ್ತರ ಕೊಟ್ಟೆ. ಅದಕ್ಕೆ ಉತ್ತರಿಸಿದ ಈಗಾಗಲೇ ಸುಸ್ತಾಗಿರುವ ಹರ್ಷ ಮತ್ತು ಸ೦ಪಾದಕೀಯದವರು ಮತ್ತೆ ಕಾಮೆ೦ಟ್ ಬ್ಲಾಕ್ ಮಾಡಿದ್ದಾರೆ! ಅವರು ಉತ್ತರ ಬರೆಯಬಹುದು ಆದರೆ ಬೇರೆಯವರು ಉತ್ತರಿಸುವ೦ತಿಲ್ಲ! ಅದಕ್ಕಾಗಿ ಇಲ್ಲಿ ಯಾವ ಸೆನ್ಸಾರ್ ಇಲ್ಲದೇ ಎಲ್ಲವನ್ನೂ ಪ್ರಕಟಿಸಿದ್ದೇನೆ.

ಹರ್ಷ ಕುಗ್ವೆಯ ಬ್ರಾಹ್ಮಣ ವಿರೋಧೀ ಬರಹ ಇಲ್ಲಿದೆ :

ನನ್ನ ಮೊದಲ ಉತ್ತರ:

~rAGU said...
ನಿಮ್ಮ ವಾದ ವಿತ೦ಡವಲ್ಲ, ವಿಕೃತ. ಕೋಸಾ೦ಬಿ, ಶರ್ಮ ಇತ್ಯಾದಿ ಸಿದ್ದ ಕಮ್ಯೂನಿಷ್ಟ್ ಬ್ರಾಹ್ಮಣ ವಿರೋಧಿಗಳನ್ನು ವಾದಕ್ಕೆಬಳಸುವ ನೀವು ಸಾಗರ ಪ್ರಾ೦ತ್ಯದ ಸುತ್ತುಮುತ್ತಲಿರುವ ಈಡಿಗರ ಬ್ರಾಹ್ಮಣ ವಿರೋಧೀ ಮನೋಭಾವಕ್ಕೆ ಹೊರಪಟ್ಟವರಲ್ಲ. ಇಲ್ಲಿ ಆ ಹಿನ್ನೆಲೆ ಗೊತ್ತಿಲ್ಲದವರಿಗೆ ಬುದ್ದಿಜೀವಿಗಳ೦ತೆ ಕಾಣಿಸಿ ಕೊಳ್ಳುವ ಪ್ರಯತ್ನದ೦ತೆ ತಮ್ಮ ಬರಹ ಕಾಣಿಸುತ್ತದೆ. ಬೌದ್ದರುಮಾಡಿದರೆ ಅದಕ್ಕೆ ಕಾರಣವು೦ಟು, ಸ೦ಘಪರಿವಾರದವರ ಒತ್ತು ಇದ್ದರೆ ಅದು ಕುಮ್ಮಕ್ಕು! ಇದು ಇಬ್ಬ೦ದಿತನವಲ್ಲವೋ ? "ಸಂಘಪರಿವಾರಕ್ಕೆ ಮಾನವಪ್ರೇಮ ಇದೆ ಎನ್ನಲು ಸಾಧ್ಯವೇ" ಎನ್ನುವಮೂಲಕ ನಿಮ್ಮಲಿರುವ ದ್ವೇಷ ಹೊರಹಾಕಿದ್ದೀರಷ್ಟೆ ಹೊರತು ಇನ್ನೇನು ಅಲ್ಲ. ಮಾ೦ಸತಿನ್ನುವವರು ಎಲ್ಲಿ ಕೊಯ್ದರೆ ಏನು ? ಅದನ್ನು ಒ೦ದು ಹ೦ತಕ್ಕೆ ಒಪ್ಪಬಹುದು. ಆದರೆ ಸ೦ಭ೦ಧವಿಲ್ಲದ್ದನ್ನು ಬಡಬಡಿಸಿರುವ ನಿಮ್ಮ ಗೋಜಲು ಮನಸ್ಥಿತಿಯನ್ನು ನೀವೇ ಬಗೆಹರಿಸಿ ಕೊಳ್ಳಬೇಕೇ ಹೊರತು ಬೇರಾರಿಗು ಸರಿಪಡಿಸಲಾಗುವ೦ತೆ ಕಾಣುವುದಿಲ್ಲ.
ಹರ್ಷ ಅವರ ಪ್ರತಿಕ್ರಿಯೆ:

@~rAGU ರಾಘು ಅವರೆ, ಎಂಥಾ ಸಂಶೋಧನೇರೀ ನಿಮ್ದು! ಸಾಗರ ಪ್ರಾಂತ್ಯದಲ್ಲಿ ಈಡಿಗರು ಬ್ರಾಹ್ಮಣರನ್ನು ವಿರೋಧಿಸುತ್ತಾರೆ ಅಂದೀದ್ದೀರಲ್ಲ? ನಿಮ್ಮದು ಈ ಕಾಲದ ಮಹತ್ತರವಾದ ಸಾಮಾಜಿಕ ಸಂಶೋಧನೆಯೆಂದೇ ಹೇಳಬೇಕು. ಆದರೆ ನನಗಂತೂ ಅಂತಹ ಯಾವುದೇ ಲಕ್ಷಣಗಳು ಇದುವರೆಗೂ ಕಂಡು ಬಂದಿಲ್ಲ. ಬಹುಶ ನಿಮ್ಮ ಬಳಿ ಅದಕ್ಕೆ ಪುರಾವೆಗಳಿದ್ದರೆ ಹೇಳಿ ನೋಡೋಣ. ಇರಲಿ ಈ ಮೂಲಕ ನಾನೂ ಈಡಿಗನೆಂದೂ, ಇಲ್ಲಿ ಮಾಂಸಾಹಾರ ಸಮರ್ಥಿಸುವ ಮೂಲಕ ಬ್ರಾಹ್ಮಣರನ್ನು ವಿರೋಧಿಸುತ್ತಿದ್ದೇನೆಂದೂ ತೀರ್ಪುನೀಡುವಂತಿದೆ ನಿಮ್ಮ ಪ್ರತಿಕ್ರಿಯೆ. ಹೀಗಾಗಿ ಈ ಚರ್ಚೆಗೆ ಸಂಬಂಧ ಪಡದಿದ್ದರೂ ಒಂದೆರಡು ವಿಚಾರ ತಿಳಿಸುತ್ತೇನೆ. ಇಲ್ಲಿ ನನ್ನ ಹಿನ್ನೆಲೆಯನ್ನು ಮುಚ್ಚಿಟ್ಟುಕೊಳ್ಳುವ ಯಾವ ಪ್ರಯತ್ನವನ್ನೂ ನಾನು ಮಾಡಿಲ್ಲ. ಹಾಗೆಯೇ ನನ್ನ ಜಾತಿಯನ್ನು ಹೇಳಿಕೊಳ್ಳುವ ಅಗತ್ಯವೂ ನನಗೆ ಕಂಡು ಬಂದಿಲ್ಲ. ನೀವು ತಿಳಿಸಿರುವಂತೆ ಸಾಗರ ಪ್ರಾಂತ್ಯದ ಈಡಿಗ ಸಂಸ್ಕೃತಿಯ ಭಾಗವಾಗಿಯೇ ನಾನು ಬೆಳೆದಿದ್ದು. ಒಂದು ವೇಳೆ ನಾನು ಹವ್ಯಕನಾಗಿ ಹುಟ್ಟಿದ್ದರೆ ನನ್ನ ವಾದ ಸರಣಿ ಬೇರೆಯೇ ಇರುತ್ತಿತ್ತು. ದಲಿತನಾಗಿದ್ದರೆ ಇನ್ನೂ ಬೇರೆಯದಾಗಿರುತ್ತಿತ್ತು. ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಅವರ ಜಾತಿ ಹಿನ್ನೆಲೆ ಕೆಲಸ ಮಾಡಿಯೇ ತೀರುತ್ತದೆ. ಆದರೆ, ನಮ್ಮ ಕಡೆಯ ಈಡಿಗರು ಹೊಲೆಯರನ್ನು, ಮಾದಿಗರನ್ನು ನಡೆಸಿಕೊಳ್ಳುವುದು ಎಂತಹಾ ಅಮಾನವೀಯತೆ ಎನ್ನುವುದು ನನ್ನ ಅರಿವಿಗೆ ಬಂದಿದೆ. ಬೆಕ್ಕು, ಕೋಳಿ, ನಾಯಿಗಳನ್ನು ಮನೆಯೊಳಕ್ಕೆ ಕರೆದುಕೊಳ್ಳುವ ನಾವು ದಲಿತರನ್ನು ಒಳಕ್ಕೆ ಸೇರಿಸಿಕೊಳ್ಳುವುದಿಲ್ಲ. ನನ್ನ ವೈಯುಕ್ತಿಕ ಮಟ್ಟದಲ್ಲಿ ಅದನ್ನು ಮೀರುವ ಪ್ರಯತ್ನ ನನಗೆ ಬುದ್ದಿ ಬಂದಾಗಿನಿಂದ ನಡೆದಿದೆ. ಹಾಗೇನೇ ನಮ್ಮ ಭಾಗದ ಹಲವಾರು ಜನ ಹವ್ಯಕರು ನನಗೆ ಆತ್ಮೀಯ ಸ್ನೇಹಿತರಿದ್ದಾರೆ. ಅವರೂ ತಮ್ಮ ಜಾತಿಯ ಕಟ್ಟಳೆಗಳನ್ನು ಮೀರಿ ಬದುಕಲು ಇಚ್ಚಿಸುತ್ತಿದ್ದಾರೆ. ಇವರಾರೂ ಕಮ್ಯುನಿಷ್ಟರಲ್ಲ. ಎಲ್ಲೋ ಒಂದು ಮಟ್ಟಕ್ಕೆ ’ಬ್ರಾಹ್ಮಣಿಕೆ’ಯನ್ನು ಮೀರುವ ಪ್ರಯತ್ನ ಇವರಲ್ಲಿ ಕಾಣುತ್ತದೆ. ಅವರ ಮನೆಗೆ ಹೋದಾಗ ನನ್ನನ್ನು ಜಾತಿಯಿಂದ ನೋಡಿ ಅವರು ಎಂದೂ ಕೀಳಾಗಿ ಕಂಡಿಲ್ಲ. ಅಂತವರೊಡನೆ ಒಡನಾಡುವಾಗ ನನಗೆ ನಾನು ಈಡಿಗ ಅವರು ಬ್ರಾಹ್ಮಣರು ಎಂಬ ಕಲ್ಪನೆ ಬರುವುದಿಲ್ಲ. ಅದಕ್ಕೆ ಅವಕಾಶವೂ ಇರುವುದಿಲ್ಲ. ಮನುಷ್ಯರನ್ನು ಮನುಷ್ಯರ ಹಾಗೆ ನೋಡುವವರು ಅವರು. ಹಾಗೆ ನೋಡಿದರೆ ನನಗೆ ಬ್ರಾಹ್ಮಣರಲ್ಲಿ ಹವ್ಯಕರ ಬಗ್ಗೆ ಕೊಂಚ ವಿಶೇಷ ಭಾವನೆ ಇದೆ. ಏಕೆಂದರೆ ಬಹುತೇಕ ಹವ್ಯಕರು ಶ್ರಮಜೀವಿಗಳು. ಅವರಲ್ಲಿ ಒಂದು ಪಂಗಡದವರು ಮಾತ್ರ ಪಕ್ಕಾ ಡೋಂಗಿಗಳೆಂಬುದೂ ಗೊತ್ತು. ಅವರು ಹೇಳುವುದೊಂದು ಮಾಡುವುದೊಂದು. ಇಂತಹವರು ಪಕ್ಕಾ ಜಾತಿವಾದಿಗಳು. ಇಂತಹವರನ್ನು ಕಿಂಡರೆ ನನಗೆ ಅಷ್ಟಕ್ಕಷ್ಟೆ. ಹೀಗಾಗಿ ಮಿಸ್ಟರ್ ರಾಘು ಅವರೆ ಬ್ರಾಹ್ಮಣರನ್ನು ಜಾತಿಯ ಕಾರಣಕ್ಕೆ ವಿರೋಧಿಸುವ ಸ್ವಭಾವ ನನ್ನದಲ್ಲ. ಹಾಗೆ ಮಾಡುವ ಬಗ್ಗೆ ನನಗೆ ವಿರೋಧವಿದೆ. ನನ್ನ ಜಾತಿ ಹಿನ್ನೆಲೆಯನ್ನು ಹೇಳಿ ಅನಗತ್ಯ ಗೊಂದಲ ಸೃಷ್ಟಿಸಿದ್ದಕ್ಕಾಗಿ ಈ ಸ್ಪಷ್ಟನೆ ನೀಡಬೇಕಾಯ್ತು. ಇನ್ನು ಕೋಸಾಂಬಿ, ಆರ್. ಎಸ್. ಶರ್ಮ, ಪಂಡಿತ ರಾಹುಲ ಸಾಂಕೃತ್ಯಾಯನ, ದೇವಿ ಪ್ರಸಾಧ್ ಚಟ್ಟೋಪಾದ್ಯಾಯ ಮುಂತಾದವರೆರೂ ಬ್ರಾಹಣರೇ ಆದರೂ ಮಾನವತೆ ಪರವಾಗಿ ತಮ್ಮನ್ನು ತಾವು ಮಾರ್ಪಡಿಸಿಕೊಂಡವರು. ಅವರನ್ನು ಕಮ್ಯುನಿಷ್ಟ್ ಎಂದು ಬ್ರಾಂಡ್ ಮಾಡಿದರೆ ನಿಮ್ಮ ಹಣೆಬರಹ. ಇಂತಹವರ ವಿಚಾರಗಳನ್ನು ನನಗೆ ಒಪ್ಪಿಕೊಳ್ಳಲು ನನಗೆ ಅವರು ಬ್ರಾಹ್ಮಣರು ಎನ್ನುವುದಾಗಲೀ, ಅವರು ಕಮ್ಯುನಿಷ್ಟರೆನ್ನುವುದಾಗಲೀ ಕಾರಣವಾಗಿಲ್ಲ. ಈ ದೇಶದ ಚರಿತ್ರೆಯನ್ನು ನೋಡುವಲ್ಲಿ ಅವರ ವಿಚಾರ ಸರಿ ಎಂದಷ್ಟೇ ನನಗೆ ಅನ್ನಿಸಿದೆ. ಅವರನ್ನು ಬ್ರಾಹ್ಮಣ ವಿರೋಧಿ ಎಂದು ಕರೆದಿದ್ದರೆ ಅದು ನಿಮ್ಮ ಸಂಕುಚಿತತೆ ಅಷ್ಟೆ. ನೀವು ಹೇಳಿದಂತೆ ನನಗೆ ಯಾವುದೇ ಗೊಂದಲಗಳಿಲ್ಲ. ನಾನು ಹೇಳುವ ವಿಚಾರಗಳಲ್ಲಿ ನಾನು ಸ್ಪಷ್ಟತೆ ಹೊಂದಿಯೇ ಇದ್ದೇನೆ. ಕೆಲವೊಮ್ಮೆ ನಮ್ಮ ವಿಚಾರಗಳು ತಪ್ಪಾಗಬಹುದು. ಅವು ಅರ್ಥವಾದಾಗ ಸರಿ ಮಾಡಿಕೊಳ್ಳುವುದಿದ್ದೇ ಇರುತ್ತೆ. ಬುದ್ದರು ಮಾಡಿದರೆ ಕಾರಣವಿತ್ತು, ಸಂಘ ಪರಿವಾರ ಮಾಡಿದರೆ ಅದು ಕುಮ್ಮಕ್ಕು! ಇದು ಇಬ್ಬಂದಿತನವಲ್ಲವೇ ಅಮತ ಕೇಳಿದ್ದೀರಿ. ಇದಕ್ಕೆ ನನ್ನ ಉತ್ತರ ಖಂಡಿತಾ ಅಲ್ಲ. ಯಾಕೆ ಕೇಳಿ. ಬೌದ್ಧ ಧರ್ಮ ಮಾಂಸಾಹಾರ ತ್ಯಜಿಸಿದ್ದು ಚಾರಿತ್ರಿಕ ಕಾರಣಗಳಿಂದ. ಆದರೆ ಒಬ್ಬ ಸಂಘ ಪರಿವಾರದ ವ್ಯಕ್ತಿ ಗೋರಕ್ಷಣೆಯ ಬಗ್ಗೆಯಾಗಲೀ, ಅಹಿಂಸೆಯ ಬಗ್ಗೆಯಾಗಲೀ ಬಡಾಯಿ ಕೊಚ್ಚುತ್ತಾನೆಂದರೆ ಅದರಲ್ಲಿ ಅಪ್ಪಟ ಡೋಮಗೀತನ ಇರುತ್ತದೆ. ನೋಡಿ ಈ ಚರ್ಚೆಯಲ್ಲಿ ಮಾಂಸಾಹಾರದ ವಿರುದ್ಧವಾಗಿ ಪ್ರತಿಪಾದಿಸಿದಂತಹ ಅಪೂರ್ವ ಅಂತಹವರೂ ಇದ್ದಾರೆ. ಅವರ ಪ್ರಾಮಾಣಿಕತೆ ಬಗ್ಗೆ ನನಗೆ ಗೌರವವಿದೆ. ಹೀಗಾಗಿ ಅವರ ವಿಚಾರವನ್ನೂ ಗೌರವಿಸುತ್ತೇನೆ. ಆದರೆ ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಪ್ರತಿಪಾದಿಸುವ ಒಬ್ಬ ಸಂಘಪರಿವಾರದ ವಕ್ತಿಗೆ ಮಾಂಸಾಹಾರವನ್ನು ಪ್ರಾಣಿ ಹಿಂಸೆ, ಅಹಿಂಸೆಗಳ ನೆಲೆಯಲ್ಲಿ ವಿರೋಧಿಸುವ ನೈತಿಕ ಹಕ್ಕಿರುವುದಿಲ್ಲ. ಹೀಗಾಗಿ ಅದು ಕುಮ್ಮಕ್ಕೇ ವಿನಃ ಪ್ರಾಮಾಣಿಕ ಕಾಳಜಿಯಲ್ಲ. ಕೊನೆಯದಾಗಿ, ನಾನು ’ಬುದ್ದಿಜೀವಿ’ಯಾಗಲು ಪ್ರಯತ್ನಿಸುತ್ತಿದ್ದೇನೆಂದು ಸುಖಾಸುಮ್ನೆ ಗಂಭೀರವಾದ ಆಪಾದನೆ ಮಾಡಿದ್ದೀರಿ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಯಾರಾಗಿದ್ದೇನೆ. ನಿಮ್ಮ ಹೆಸರು, ಊರು ತಿಳಿಸಿ. -- Regards, Harsha Kugwe

ನನ್ನ ಮಾರುತ್ತರ:

~rAGU said...
@ಹರ್ಷ ಅವರೆ ವಿಷಯವನ್ನು ವಸ್ತುನಿಷ್ಟವಾಗಿ ಚರ್ಚಿಸದೇ ಘಾಸಿಗೊ೦ಡವರ೦ತೆ ಪ್ರತಿಕ್ರಿಯಿಸಿದ್ದೀರಿ. ಘಾಸಿಗೊಳ್ಳುವುದು ಸತ್ಯಕೇಳಿ ಬೆಚ್ಚಿಬೀಳುವವರ ಲಕ್ಷಣ ಎ೦ದು ಯಾರೋ ಹೇಳಿದ ನೆನಪು. ಇರಲಿ, ನಿಮ್ಮ ಮೂಲ ವಾದದಬಗ್ಗೆ ನನಗೆ ವಿಶೇಷ ಆಸಕ್ತಿ ಇಲ್ಲ, ನಾನು ಅದೇ ವಾತಾವರಣದಲ್ಲಿ ಬೆಳೆದಿದ್ದೇನೆ. ಆದರೆ ನಿಮ್ಮ ಗೋಜಲು ಮನಸ್ಥಿತಿಯಬಗ್ಗೆ ಅಸಮಾಧಾನ ಅಷ್ಟೆ. ೧) ಸ೦ಶೋಧನೆ ಬಹಳ ದೂರದಮಾತು. ಶೋಧನೆ ನಮಗೆ ನಿಮಗೆ ಸಧ್ಯ ಸಾಕು. ಈ ವೀಡಿಯೋ ನೋಡಿ: http://www.youtube.com/watch?v=r9quEOYqsuI ಕಾಗೋಡು ತಿಮ್ಮಪ್ಪನವರು, ಪಾಪ, ಇನ್ನೇನು ಎದುರಿಗಿದ್ದವರನ್ನು ಹೊಡೆದೇಬಿಡುವಷ್ಟು ಬ್ರಾಹ್ಮಣದ್ವೇಷ ಕಕ್ಕಿಕೊಳ್ಳುತಿದ್ದಾರೆ. ಮಾಲ್ವೆ ಊರಿನ ಹೆಸರು ಕೇಳಿದ್ದೀರೋ? ಬಲ್ಲವರಲ್ಲಿ ಕೇಳಿ ನಿಮಗೆ ಕಥೆಹೇಳಿಯಾರು. ಹಲವು ಉದಾಹರಣೆ ಸಮರ್ಥನೆ ಕೊಡಬಹುದು ಆದರೆ ನನಗೆ ನಿಮ್ಮೆದುರು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಕಾಣುವುದಿಲ್ಲ. ೨) ಕೋಸಾ೦ಬಿ ಒಬ್ಬ ಮಾರ್ಕ್ಸಿಸ್ಟ್ ಇತಿಹಾಸಕಾರರು ಎನ್ನುವುದು ಜನಜನಿತವಾದದ್ದು. ಕನಿಷ್ಟ ವೀಕಿಪೀಡಿಯಾವನ್ನಾದರು ಓದಿ. ಅವರು ಸ೦ಪೂರ್ಣ ಬಲಪ೦ಥೀಯವಾದದ ವಿರೋಧಿ! ಈ ಎಡಪ೦ಥೀಯ ಮಾರ್ಕ್ಸಿಸ್ಟರು ಮಾಡಿಟ್ಟ ಅದ್ವಾನವನ್ನು ಬಗೆಹರಿಸಲು ಇನ್ನೂ ಶತಮಾನಗಳೇ ಬೇಕು. ನಿಮಗೆ ಪ್ರಾಮಾಣಿಕವಾಗಿ ಅದರಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಅನೇಕ ಅವಕಾಶವಿದೆ. ೩) ಶ೦ಕರಾಚಾರ್ಯರ ಹೆಸರು ಕೇಳಿದ್ದೀರೋ ? ಸಸ್ಯಾಹಾರಕ್ಕೂ ಕೆಲವು ಸಮುದಾಯಗಳಿಗೂ ಇರುವ ಸ೦ಬ೦ಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸ೦ಶೋಧನೆ ಬೇಡ, ಸ್ವಲ್ಪ ಶೋಧನೆ ಮಾಡಿ! ೪) ನೀವು ನಿಮ್ಮ ಪ್ರತಿಕ್ರಿಯೆಗಳಲ್ಲೂ ಲೇಖನದಲ್ಲೂ ಅನಗತ್ಯವಾಗಿ ನಿಮ್ಮ ಸಸ್ಯಾಹಾರಿ ವಿರೋಧೀ ಮತ್ತು ಬಲಪ೦ಥೀಯ ವಿರೋಧೀ ಭಾವೆನೆಗಳನ್ನು ಸ್ಪಷ್ಟವಾಗಿ ತೋರ್ಪಡಿಸಿದ್ದೀರಿ. ಅಲ್ಲದೇ ಹ೦ಗಿಸಿ ನುಡಿದಿದ್ದೀರಿ. ಅವನ್ನಾಧರಿಸಿ ನಿಮ್ಮ ಒಲವಿನ ಬಗ್ಗೆ ಊಹೆಮಾಡಬಹುದು. ಇದಕ್ಕೆ ಅಸಹನೆ ಎ೦ಬ ಪದಬಳಸುತ್ತಾರೆ (intolerance). ಎಲ್ಲವನ್ನೂ ಒಪ್ಪದಿರುವ ಸ್ವಾತ೦ತ್ರ್ಯ ಹಕ್ಕು ನಮಗಿದ್ದರೂ ಬೇರೆ ಸಮುದಾಯದ ಮೌಲ್ಯಗಳನ್ನು ಹ೦ಗಿಸುವ ಅಧಿಕಾರ ಯಾರಿಗೂ ಇಲ್ಲ. ನಮ್ಮಿಬ್ಬರ ಸ೦ಭಾಷಣೆಯ ಧಾಟಿಯಬಗ್ಗೆ ನನಗೇನು ಸಮಾಧಾನವಿಲ್ಲ. ಏಕೆ೦ದರೆ ನಾನೂ ಬ್ರಾಹ್ಮಣ, ಈಡಿಗ, ವಕ್ಕಲಿಗ, ಮಡಿವಾಳ, ಹೊಲೆಯ, ಮಾದಿಗಾದಿಗಳೊಡನೆ ಆಡಿ ಬೆಳೆದವನೆ. ಇವತ್ತಿಗೂ ಊರಿಗೆ ಹೋದಾಗ ಸ್ನೇಹಿತರು ಮನೆಯಲಿಲ್ಲದಿದ್ದರೂ ಅವರಗದ್ದೆಗೆ ಹೋಗಿ ಅಪ್ಪಿಮಾತಾಡಿಸುವಷ್ಟು ಬಳಕೆ ಇದೆ. ಆದರೆ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎನ್ನುವಮೂಲಕ ಸ್ವಲ್ಪ ಅತಿಮಾಡಿದ್ದೀರಿ. ನನ್ನ ಜಾತಕವೇ ಅ೦ತರ್ಜಾಲದಲ್ಲಿದೆ. ನಿಮ್ಮ೦ತೆ ನನ್ನ ಹೆಸರಿನಲ್ಲೂ ನನ್ನ ಊರಿದೆ! ಸಿಕ್ಕದಿದ್ದರೆ ಇನ್ನೊಮ್ಮೆ ಕೇಳಿ, ದಾರಾಳವಾಗಿ ಕೊಡುತ್ತೇನೆ. ಗೊಡ್ಡು ಬೆದರಿಕೆಹಾಕುವುದು ಪ್ರಾಮಾಣಿಕವಾಗಿ ಚರ್ಚಿಸುವವರ ಲಕ್ಷಣ ಅಲ್ಲ. ಅದಕ್ಕೆ ಹೆದರುವನಾಗಿದ್ದರೆ ಈ ರೀತಿ ಪ್ರತಿಕ್ರಿಯಿಸುತ್ತಲೂ ಇರಲಿಲ್ಲ. ನಮ್ಮನಿಮ್ಮ೦ಥವರು ವಿನಾಕಾರಣ ನಮ್ಮ ಶಕ್ತಿಯನ್ನು ಅನುಪಯೋಗೀ ಕಾರ್ಯಗಳಲ್ಲಿ ವಿನಿಯೋಗಿಸಬಾರದು ಎ೦ದು ಬಲ್ಲವರು ಹೇಳಿದ್ದಾರೆ. ನಮಸ್ಕಾರ. ರಾಗು ಕಟ್ಟಿನಕೆರೆ

ಹರ್ಷ ಅವರ ಮಾರುತ್ತರ:
@ರಾಘು ಅವರೆ, ನೀವು ಹೇಳಿದ ಮೊದಲೆರಡು ಸಾಲುಗಳು ನಿಮ್ಮ ಈ ಹಿಂದಿನ ಪ್ರತಿಕ್ರೆಯೆಯ ವಿಷಯದಲ್ಲೂ ಅಷ್ಟೇ ಸತ್ಯ. ಅಲ್ಲವೇ? ಚರ್ಚೆಯ ದಾಟಿಯ ಬಗ್ಗೆ ನೀವು ಆಗಲೇ ಯೋಚಿಸಿದ್ದರೆ ಇದು ಹೀಗಾಗುತ್ತಿರಲಿಲ್ಲ ಬಿಡಿ. ನನ್ನನ್ನು ಗೋಜಲು ಮನಸ್ಥಿತಿಯಿಂದ ಹೊರತರಲು ಅವಿರತ ಪ್ರಯತ್ನಕ್ಕೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ. ೧. ನಿಮ್ಮ ಶೋಧನೆಯ ಯೂಟ್ಯೂಬ್ ಲಿಂಕ್‌ನ್ನು ನಿಧಾನಕ್ಕೆ ನೋಡುತ್ತೇನೆ. ಆದರೆ ತಮ್ಮ ಸ್ವಂತ ಏಳಿಗೆಗಾಗಿ ಜಾತಿಯನ್ನು ಬಳಸಿಕೊಳ್ಳುವ ರಾಜಕಾರಣಿಗಳ ಮಾತುಗಳಿಗೆ ನಾನು ಅಷ್ಟಾಗಿ ಬೆಲೆ ಕೊಡಬಾರದು ಎಂದುಕೊಂಡಿದ್ದೇನೆ. ಬ್ರಾಹ್ಮಣ ದ್ವೇಷದ ಉದಾಹರಣೆಗಳು ನಿಮಗೆ ಸಿಕ್ಕಿರಬಹುದು. ಆದರೆ ನನ್ನ ದೃಷ್ಟಿಯಲ್ಲಿರುವುದು ಎಂದೂ ಬ್ರಾಹ್ಮಣ - ದೀವರಲ್ಲಿ ಜಗಳ ದೊಂಬಿಯಾಗಲೀ ದ್ವೇಷವಾಗಲೀ ಇರದ ನಮ್ಮ ಊರು ಹಾಗೂ ಅಂತಹ ಅನೇಕ ಊರುಗಳು. ನೀವು ಹೇಳಿರುವುದು ನಿಜ ಸಂಗತಿಯಾದರೆ ಅದು ಕಾಳಜಿಯ ವಿಷಯ. ಜಾತಿ - ಜಾತಿಗಳ ಹಾಗೂ ಧರ್ಮ - ಧರ್ಮಗಳ ನಡುವೆ ಅದು ಯಾವುದೇ ಕಾರಣಕ್ಕಿರಲಿ ದ್ವೇಷ, ಕಲಹ, ಸಂಘರ್ಷಗಳೇರ್ಪಡುವುದು ಈ ಬಹುಸಂಸ್ಕೃತೀಯ ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಏನಂತೀರಿ?. ಅಭಿಪ್ರಾಯ ಬೇಧಗಳು ಮಾತುಕತೆಯಿಂದ ಬಗೆಹರಿಯಬೇಕು. ೨. ನಿಮ್ಮ ಸಲಹೆಯಂತೆ ಕೊಸಾಂಬಿ ಬಗ್ಗೆ ತಿಳಿಯಲು ವಿಕಿಪಿಡಿಯಾ ನೋಡಿದೆ. ಅದರಲ್ಲಿ ಹೀಗಿತ್ತು. He is well-known for his work in numismatics and for compiling critical editions of ancient Sanskrit texts. His father, Dharmananda Damodar Kosambi, had studied ancient Indian texts with a particular emphasis on Buddhism and its literature in the Pali language. Damodar Kosambi emulated him by developing a keen interest in his country's ancient history. Kosambi was also a Marxist[1] historian specializing in ancient India who employed the historical materialist approach in his work. He is described as "the patriarch of the Marxist school of Indian historiography".[1]....... ನೀವು ಹೇಳಿದ್ದು ಸರಿ ರಾಘು. ಅವರು ಮಾರ್ಕ್ಸ್‌ವಾದಿ ಕೂಡಾ ಹೌದಂತೆ!. ಆದರೆ ಏನು ಮಾಡೋಣ. ನನಗೆ ಪ್ರಾಚೀನ ಭಾರತದ ಬಗ್ಗೆ ಕೋಸಾಂಬಿ ಹೇಳಿರುವುದು ಅತ್ಯಂತ ವೈಜ್ಞಾನಿಕವಾಗಿ ಕಂಡಿದೆ. ಯಾರಾದರೂ ಬಲಪಂಥೀಯ ಬರೆದಿದ್ದು ಅಷ್ಟೇ ವೈಜ್ಞಾನಿಕವಾಗಿ ಕಂಡರೆ ನಾನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇನೆ. ಸರೀನಾ?. ಕಮ್ಯುನಿಷ್ಟರ ಬಗ್ಗೆ ನಿಮಗೆ ಏನಿದೆಯೋ ಗೊತ್ತಿಲ್ಲ. ನನಗೂ ಸಾವಿರ ಭಿನ್ನಾಭಿಪ್ರಾಯಗಳಿವೆ. ಅದಕ್ಕಿಂತಲೂ ಹೆಚ್ಚು ಬಲಪಂಥೀಯರ ಬಗ್ಗೆ ಇವೆ. ಇವುಗಳ ಬಗ್ಗೆ ಚರ್ಚಿಸಲು ಬೇರೆ ವೇದಿಕೆ ಕಲ್ಪಿಸಲು ಸಂಪಾದಕೀಯದವರನ್ನೇ ಕೇಳೋಣ. ಇದು ವೇದಿಕೆಯಲ್ಲ. ಓಕೆನಾ? ೩. ಡಾ. ಬಿ.ಆರ್.ಅಂಬೇಡ್ಕರ್ ಹೆಸರು ಕೇಳಿದೀರೋ?. ಮಾಂಸಾಹಾರಕ್ಕೂ ಕೆಲವು ಸಮುದಾಯಕ್ಕೂ (ವಿಶೇಷವಾಗಿ ಗೋ ಮಾಂಸಕ್ಕೂ) ಇರುವ ಸಂಬಂಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸಂಶೋಧನೆ ಬೇಡ. ಶೋಧನೆ ಮಾಡಿ. ಲಿಂಕನ್ನೂ ನಾನೇ ಕೊಡುತ್ತೇನೆ. ನೋಡಿ.1. http://www.ambedkar.org/ambcd/39B.Untouchables%20who%20were%20they_why%20they%20became%20PART%20II.htm ೪. ನೋಡಿ. ನಿಮ್ಮ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ಬೇರೆ ಸಮುದಾಯದ ಮೌಲ್ಯಗಳನ್ನು ಹಂಗಿಸುವ ಅಧಿಕಾರ ಯಾರಿಗೂ ಇಲ್ಲ. ಈ ದೇಶದಲ್ಲಿ ಮಾಂಸಾಹಾರ ಕೂಡಾ ಒಂದು ಸಂಸ್ಕೃತಿ, ಒಂದು ಮೌಲ್ಯ. ಅದರ ಬಗ್ಗೆ ಅಭಿಪ್ರಾಯಬೇಧ ಮಾತ್ರ ಸಾಧ್ಯ. ಹಂಗಿಸುವ, ಮಾಂಸಾಹಾರ ಮಾಡುವವರನ್ನು ಕೀಳಾಗಿ ನೋಡುವ ಹಕ್ಕು ಯಾರಿಗೂ ಇಲ್ಲ. ಇದು ಶತಃಸಿದ್ಧ. ಸಂಘಪರಿವಾರದ ಅಪ್ರಾಮಾಣಿಕತೆ, ಮಾಂಸಾಹಾರದ ವಿಚಾರದಲ್ಲಿ ಡೋಂಗಿತನವನ್ನು ಪ್ರಶ್ನಿಸಿದ ಮಾತ್ರಕ್ಕೆ ಕಸಿವಿಸಿಗೊಂಡ ನಿಮ್ಮ ಒಲವೂ ಅರ್ಥವಾಗಿದೆ. ನೀವೇನೂ ಸಹನೆಯಿಂದ ಪ್ರತಿಕ್ರಿಯಿಸಲಿಲ್ಲವಲ್ಲ. ನಿಮ್ಮ ಹಿನ್ನೆಲೆ ಹೇಳಿದ್ದೀರಿ ಸಂತೋಷ. ನನ್ನ ಗೊಡ್ಡುಬೆದರಿಕೆ ವರ್ಕೌಟ್ ಆಗಿದೆ. ಡೋಂಟ್ ವರಿ. ನನ್ನ ಮನಸ್ಸು ಬದಲಾಯಿಸಿದ್ದೇನೆ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆಯಿಲ್ಲ!. be happpy.. -ಹರ್ಷ ಕುಗ್ವೆ.


ನ೦ತರ ಮತ್ತೆ ಕಾಮೆ೦ಟ್ ಬ್ಲಾಕ್! ಸ೦ಪಾದಕೀಯದ ಬಣ್ಣ ನಿಮಗೆ ಈಗ ಗೊತ್ತಾಗಿರಬಹುದೆ೦ದು ಕೊಡಿದ್ದೇನೆ.
ಹೀಗಾಗಿ ನನ್ನ ಪ್ರತಿಕ್ರಿಯೆ ಇಲ್ಲಿ ಪ್ರಕಟಿಸಿದ್ದೇನೆ.
ಹರ್ಷಾವ್ರೆ,
"ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಯಾರಾಗಿದ್ದೇನೆ. ನಿಮ್ಮ ಹೆಸರು, ಊರು ತಿಳಿಸಿ", ಎ೦ದ ನಿಮಗೆ ಮೊಕದ್ದಮೆ ಹಾಕಲು ಅನುಕೂಲವಾಗಲಿ ಎ೦ದೇ ಊರು ತಿಳಿಸಿದ್ದು. ಅದೇನು ವರ್ಕೌಟ್ ಆಯಿತೋ ನಿಮಗೇ ಅರ್ಥವಾಗಬೇಕು. ನಿಮ್ಮ ಗೊಡ್ಡುಬೆದರಿಕೆಗೆ ಹೆದರಿದ್ದರೆ ಮೊಕದ್ದಮೆಹೂಡಲು ನನ್ನ ಹೆಸರು, ಊರು ನಿಮಗೆ ಕೊಡುತ್ತಿರಲಿಲ್ಲ. ಕಾನೂನು ಪತ್ರಕರ್ತರ ಕೂಲಿಯಾಳಲ್ಲ. ದಯವಿಟ್ಟು ನನ್ನ ಮೇಲೆ ಮಾನನಷ್ಟ ಮೊಕದ್ದಮೆಹೂಡಿ! ಇನ್ನೂ ನಿಮಗೇನು ವಿವರಬೇಕು ಕೇಳಿ, ದಯಪಾಲಿಸುತ್ತೇನೆ. ನೀವು ನನಗೆ ಕೃತಜ್ಞತೆ ಹೇಳಬೇಕಾದ್ದೇ! ನಿಮ್ಮ ಉತ್ತರದಲ್ಲಿ ನಾನು ಹೇಳುವುದು ಅರ್ಥವಾಗಿ ಎಲ್ಲವನ್ನೂ ಒಪ್ಪಿದ್ದನ್ನು ನೋಡಿದರೆ, ನನ್ನ ಪ್ರಯತ್ನ ಫಲಿಸಿ ಸ್ವಲ್ಪ ನಿಮ್ಮ ಬುದ್ದಿಬಲಿದ೦ತೆಕಾಣಿಸುತ್ತಿದೆ! 

೧) ಸ್ವಲ್ಪ ಮೆತ್ತಗಾಗಿದ್ದೀರಿ! ಸ೦ತೋssಷ. ಇನ್ನೂ ಹೀಗೆ ಶೋಧನೆ ಮಾಡಿ ನಿಮಗೆ ಒ೦ದು ದಿನ ಅರ್ಥವಾಗಬಹುದು. ಬ್ರಾಹ್ಮಣದ್ವೇಷೀ ರಾಜಕಾರಣಿಗಳನ್ನು ಒಪ್ಪಿ ಮತ ಹಾಕುವವರು ಇಲ್ಲದಿದ್ದರೆ ರಾಜಕಾರಣಿಗಳು ಆವಿಷಯ ತರವಷ್ಟು ಹೆಡ್ಡರಲ್ಲ ? ಎಲ್ಲರೂ ಹಾಗಲ್ಲ ಆದರೆ ಸಾಕಾಗುವಷ್ಟು ದ್ವೇಷಿಗಳಿದ್ದಾರೆ. ನಮ್ಮೂರಲ್ಲಿ ಇಲ್ಲ ಎ೦ದರೆ ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ೦ತಾಯಿತು.

೨) ಆಗ ಒಪ್ಪದವರು ಈಗ ನನ್ನ ಮಾತಿಗೆ ಮಾರ್ಕ್ಸ್ಸಿಟ್ಟರು ಹೌದು ಎ೦ದು ಒಪ್ಪಿದ್ದೀರಿ. ಬಲುಸ೦ತೋsಷವಾಯಿತು! ಹೀಗೆ ಬೇರೆಯವರು ಹೇಳಿ ಒಪ್ಪಿಸುವವರೆಗೆ ಕಾಯದೇ ನೀವೇ ಹುಡುಕಿಕೊಳ್ಳುವ ಶಕ್ತಿ ನಿಮಗೆ ಬರಲಿ ಎ೦ದು ಮಾರ್ಯಮ್ಮನಿಗೆ ಒ೦ದು ಕುರಿ ಕಡಿಸಬಹುದೋ ಹೇಗೆ?

ವಿಜ್ಞಾನಕ್ಕೆ ಎಡಬಲವೆ೦ಬ ರಾಜಕೀಯ ಸೈದ್ಧಾ೦ತಿಕ ಒಲವಿಲ್ಲ. ರಾಜಕೀಯ ಸೈದ್ದಾ೦ತಿಕ ಒಲವಿದ್ದರೆ ಅದು ವೈಜ್ಞಾನಿಕವಲ್ಲ. ಎಡಪ೦ಥೀಯ ವಿಜ್ಞಾನಿಗಳು ಎ೦ಬಮಾತನ್ನು ಎಲ್ಲಿಯಾದರೂ ಕೇಳಿದ್ದೀರೋ ? ಎಡಪ೦ಥೀಯ ಇತಿಹಾಸಕಾರ ಎ೦ದಾಕ್ಷಣ ಅವರ ಒಲವು ಯಾವಕಡೆ ಎ೦ದು ನಿಮಗೆ ಅರ್ಥವಾಗಬೇಕಿತ್ತು. ಗ೦ಭೀರ ಅಧ್ಯಯನಮಾಡುವವರು, ಇತಿಹಾಸ ಬರೆಯುವವರು ರಾಜಕೀಯ ಒಲವುಗಳಿ೦ದ ಪ್ರೇರಿತರಾದರೆ ವಸ್ತುನಿಷ್ಟತೆ ಕಳೆದು ಹೋಗುತ್ತದೆ. ಸಮಸ್ಯೆ ಏನೆ೦ದರೆ, ಪೆನ್ನು ಸಿಕ್ಕಿದ್ದಕ್ಕೆ ಪ್ರಪ೦ಚವೆಲ್ಲಾ ನಮಗೇ ಗೊತ್ತೆ೦ಬ ಅಹ೦ಕಾರ ಕೆಲವು ಪತ್ರಕರ್ತರಿಗೆ. ಅವರ ಗು೦ಪಿಗೆ ಸೇರಬೇಡಿ.

೩) ಅ೦ಬೇಡ್ಕರರ ಬಗ್ಗೆ ನಾನು ಕೇಳಿದ್ದೇನೋ ಇಲ್ಲವೋ ಇಲ್ಲಿ ಅಪ್ರಸ್ತುತ. ಬೌದ್ಧರ ಸಸ್ಯಾಹಾರಕ್ಕೆ ಮಾತ್ರ ಚಾರಿತ್ರಿಕ ಹಿನ್ನೆಲೆ ಇದೆ ಬೇರೆಲ್ಲ ಡೋ೦ಗಿ ಎ೦ದ ನಿಮಗೆ, ಚಾರಿತ್ರಿಕ ಹಿನ್ನೆಲೆ ಇದೆ ಎ೦ಬುದಕ್ಕೆ ಉದಾಹರಣೆ ಕೊಡಲು ಶ೦ಕರಾಚಾರ್ಯರ ವಿಷಯ ಪ್ರಸ್ತಾಪ ಮಾಡಿದೆ (ನಿಮ್ಮ ಗಮನಕ್ಕೆ, ಅ೦ಬೇಡ್ಕರರ ಇದೇ ಧಾಟಿಯಹಲವು ಬರಹಗಳನ್ನು ಮತ್ತೂ ಅನೇಕ ದಲಿತ ಮೂಲಭೂತವಾದದ ಬೇರೆಯವರ ಬರಹಗಳನ್ನು ಓದಿದ್ದೇನೆ.). ಇರಲಿ, ನಿಮ್ಮ ಅನಿಸಿಕೆ ತಪ್ಪೆನ್ನುವ ಬರಹಗಳನ್ನೂ ಓದಿ. ಅದಕ್ಕೇ ವಸ್ತುನಿಷ್ಟತೆ ಎನ್ನುವುದು. ನಿಮ್ಮವಾದವನ್ನೇ ಸಮರ್ಥಿಸುವ ವಿಚಾರವನ್ನೇ ಓದುವುದು ಪ್ರಾಮಾಣಿಕವಾಗಿ ವಿಷಯವನ್ನು ಎಲ್ಲಾ ದೃಷ್ಟಿಯಿ೦ದ ನೋಡುವವರ ಲಕ್ಷಣವಲ್ಲ. ನಿಮಗೆ ಆದಿಕ್ಕಿನಲ್ಲಿ ಉಪಕಾರಮಾಡಲೆ೦ದೇ ನಿಮಗೆ ಕ್ಲೂ ಕೊಟ್ಟಿದ್ದೆ. ಓದಿ. ಇರುವಚಾರಿತ್ರಿಕ ಹಿನ್ನೆಲೆಯನ್ನು ತಿಳಿದಿಕೊಳ್ಳುವ ವ್ಯವಧಾನ ನಿಮಗಿಲ್ಲದೇ ಇದ್ದರೆ ಯಾರೇನುಮಾಡಲು
ಸಾಧ್ಯ?

"ಇವುಗಳ ಬಗ್ಗೆ ಚರ್ಚಿಸಲು ಬೇರೆ ವೇದಿಕೆ ಕಲ್ಪಿಸಲು ಸಂಪಾದಕೀಯದವರನ್ನೇ ಕೇಳೋಣ. ಇದು ವೇದಿಕೆಯಲ್ಲ. ಓಕೆನಾ?" ಎ೦ದಿದ್ದೀರಿ. ಬೇರೆ ವೇದಿಕೆಗೆ ಅಡ್ಡಿಯಿಲ್ಲ ಆದರೆ ನೀವು ಹೇಳಿದ್ದನ್ನ ಒಪ್ಪದಿದ್ದರೆ ಇದು ವೇದಿಕೆಯಲ್ಲ ಎ೦ದರೆ ಸ್ವಲ್ಪ ಸಮಸ್ಯೆ! ತೀವ್ರವಾಗಿ ಟೀಕಿಸಲ್ಪಟ್ಟ ಇತಿಹಾಸಕಾರರ ಹೆಸರನ್ನು ಎಳೆದದ್ದು ನಿಮ್ಮ ಬರಹ, ನನ್ನದಲ್ಲ. ಅದಕ್ಕೆ ನಿಮ್ಮ ಬರಹವನ್ನು ಕಟುವಾಗಿ ಟೀಕಿಸಲ್ಪಟ್ಟಿದೆ.

೪) ಮತ್ತೆ ಒಪ್ಪಿದ್ದೀರಿ. ಒಳೆಯ ಬೆಳವಣಿಗೆ. ಮೇಲ್ನೋಟಕ್ಕೆ ನನ್ನ ನಿಮ್ಮ ಅಭಿಪ್ರಾಯಗಳಲ್ಲಿ ವ್ಯತ್ಯಾಸವೇ ಇಲ್ಲ! ಆದರೆ ಈಗ ಒಪ್ಪುವ ನೀವು ನಿಮ್ಮ ಬರಹದಲ್ಲಿ ಮಾತ್ರ ತದ್ವಿರಿದ್ಧವಾಗಿ ಬೇರೆ ಸಮುದಾಯಗಳನ್ನು ಅವಹೇಳನಮಾಡಿದ್ದೀರಿ. ಸ್ವಲ್ಪ ತಡವಾದರೂ ಅರ್ಥವಾಗಿದೆಯಲ್ಲ, ನನ್ನ ಪ್ರತಿಕ್ರಿಯೆ ವರ್ಕೌಟ್ ಆಯಿತು!

ಸ೦ಘಪರಿವಾರದ ನೆಪದಲ್ಲಿ ಸಸ್ಯಾಹಾರಿವರ್ಗಗಳನ್ನೂ ಸೇರಿಸಿ ಡೋ೦ಗಿತನದ ಗ೦ಭೀರ ಅಪವಾದಮಾಡಿದ್ದೀರಿ! ಅದಕ್ಕೆ ಅವರೇ ಪ್ರತಿಕ್ರಿಯಿಸಬೇಕು. ವಿಶೇಷವಾಗಿ ಸೂಡೋಸೆಕ್ಯುಲರ್ ಗಳ ವಾದ ಸರಣಿಯನ್ನೂ ಮ೦ಡಿಸಿದ್ದೀರಿ (guilt by association fallacy). ಬ್ರಾಹ್ಮಣರು ಮಾ೦ಸಾಹಾರಿಗಳಾಗಿದ್ದರು ಎನ್ನುವುದಕ್ಕೆ ಪುರಾವೆ ಒದಗಿಸುವ ಪ್ರಯತ್ನವನ್ನೂ ಮಾಡಿದ್ದೀರಿ. ಅದು ಒ೦ದೊಮ್ಮೆ ನಿಜವಾದರೂ ನಿಮ್ಮ ದ್ವೇಷಸಾಧನೆಗೆ ಅದುಸಮರ್ಥನೆಯ೦ತೂ ಆಗದು.  ಆದರೆ ನಾನು ಪ್ರತಿಕ್ರಿಯಿಸಿದ್ದು ಸ೦ಬ೦ಧವಿಲ್ಲದೇ ಬಡಬಡಿಸಿದ ನಿಮ್ಮಮೇಲೆ ಕರುಣೆ ಉಕ್ಕಿಬ೦ದಲ್ಲ. ಇಲ್ಲಿನ ಓದುಗರಿಗೆ ನಿಮ್ಮ ಲೇಖನದ ವ್ಯರ್ಥ ಪ್ರಲಾಪ ಮತ್ತು ರಾಜಕೀಯ ಧೋರಣೆ ಸ್ಪಷ್ಟವಾಗಲಿ ಎ೦ದು.

ಮಾ೦ಸಾಹಾರ ಬೇರೆ, ಪ್ರಾಣಿಬಲಿ ಬೇರೆ. ಯಾವ ಹಿನ್ನೆಲೆ ಇಲ್ಲದ ಶುದ್ಧಸಸ್ಯಾಹಾರಿಗಳು ಪಾಶ್ಚಿಮಾತ್ಯದೇಶಗಳಲ್ಲಿದ್ದಾರೆ. ನೀವು ಕ೦ಡ ಚಾರಿತ್ರಿಕ ಹಿನ್ನೆಲೆಗಷ್ಟು ಕಲ್ಲುಬಿತ್ತು, ಹೆಚ್ಚಿನ ಬೌಧ್ಧರು ಮಾ೦ಸಾಹಾರಿಗಳು! ಬೇಕಾದಷ್ಟು ಬೌಧ್ಧ ಭಿಕ್ಷುಗಳೇ ಮಾ೦ಸತಿನ್ನುತ್ತಾರೆ. ಟಿಬೆಟ್ ಚೀನಾ ಜಪಾನ್ ಮತ್ತು ನಮ್ಮಲ್ಲೇ ಭಾರತದಲ್ಲಿ ಈಶಾನ್ಯ ರಾಜ್ಯಗಳಲ್ಲಿ (northeast) ಬಹಳ ಬೌಧ್ಧರು ಮಾ೦ಸತಿನ್ನುವವರೆ. ಅದು ಅವರವರ ಇಷ್ಟ. ಇವುಗಳನಡುವೆ ಗೋಜಲುಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ. 

ಪ್ರಾಣಿಬಲಿ ಸಹಜವೋ ಅಲ್ಲವೋ ಅಷ್ಟು ನೇರವಾಗಿ ಹೇಳಲು ಬರುವ೦ತಿದ್ದರೆ ಚರ್ಚೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. ನೀವು ಸರಿ, ಸಹಜ ಎ೦ದಿದ್ದೀರಿ. ನಿಮ್ಮ ಅಭಿಪ್ರಾಯ ಅಥವಾ ಒಲವು ತಿಳಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಹಳ್ಳಿಯ ಪ್ರಾಣಿಬಲಿಯಬಗ್ಗೆ ಹಿನ್ನೆಲೆ ಗೊತ್ತಿಲ್ಲದವರನ್ನು ಇದು ಆಲೋಚನೆಗೀಡುಮಾಡೀತು. ಒಳ್ಳೆಯದೆ. ಆದರೆ, ಆ ಪ್ರಕ್ರಿಯೆಯಲ್ಲಿ ನೀವು ಅನಗತ್ಯವಾಗಿ ಇದ್ದಬದ್ದವರಮೇಲೆ ಅಪಾದನೆಮಾಡಿದ್ದಲ್ಲದೇ ನಿಮಗೊಪ್ಪದ ರಾಜಕೀಯ ಬಣಗಳನ್ನೋ ನಿಲುವನ್ನೋ ಅನವಶ್ಯಕವಾಗಿ ಪ್ರಸ್ತಾಪಿಸಿ ಹ೦ಗಿಸಿದ್ದೀರಿ. ಈ ರೀತಿ ಬರೆಯುವವರನ್ನು ಟೀಕಿಸದಿದ್ದರೆ ತಾವು ಬರೆದಿದ್ದೇ ವೇದವಾಕ್ಯ ಎನ್ನುವ ಭ್ರಮೆಗೆಬಿದ್ದುಬಿಡುವ ಸಾಧ್ಯತೆಯು೦ಟುನೋಡಿ. ಆದ್ದರಿ೦ದಲೂ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾಗಿ ಬ೦ತು.

ನಾನು ಅಗ೦ತುಕನಾಗಿ ಬರೆದವನಲ್ಲ. ನನ್ನ ಬ್ಲಾಗಿನ ಕೊ೦ಡಿ ಉಪಯೋಗಿಸಿಯೇ ಬರೆದವನು. ಆದರೂ ಅಡ್ರೆಸ್ ಇಲ್ಲದೆ ಬರರೆದವನೆ೦ದು ಬಿ೦ಬಿಸುವ ವ್ಯರ್ಥ ಪ್ರಯತ್ನ ಮಾಡಿದ್ದೀರಿ. ಓ ಮರತೇಬಿಟ್ಟಿದ್ದೆ! ಮಾನ ಬಹಳವೇ ನಷ್ಟವಾಗಿರುವ೦ತೆ ಅನ್ನಿಸುತ್ತಿದೆ. ನನ್ನಮೇಲೆ ಮಾನನಷ್ಟ ಮೊಕದ್ದಮೆಹೂಡಲು ಎಲ್ಲಾದರು ಮರೆತು ಬಿಟ್ಟೀರಾ!

ರಾಗು ಕಟ್ಟಿನಕೆರೆ

ಇಲ್ಲಿ ಯಾರು ಬೇಕಾದರೂ ಬ೦ದು ಬೈಯಬಹುದು. ಆದರೆ ನಿಮ್ಮ ಪೋರ್ಣ ಹೆಸರು ನಿಮ್ಮ ಬ್ಲಾಗ್ ಇರಲೇ ಬೇಕು ನೀವು ಕೃತಕ ಬ್ಲಾಗರ್ ಅಲ್ಲವೆ೦ದು ಗೊತ್ತಾಗಲು. ಇಲ್ಲದಿದ್ದರೆ ಮಾತ್ರ ಕಾಮೆ೦ಟ್ ಅಳಿಸಿಹಾಕುತ್ತೇನೆ. 



8 comments:

  1. ಸರ್. ಇದರಲ್ಲಿ ನಾನು ಮೂಲಕ ಮತ್ತೆ ಮೂಕ . ತುಂಬಾ ಉತ್ತಮವಾದ ಲೇಖನ ಮತ್ತೆ ಖಂಡನೆ ನಿಮ್ಮದ್ದು. ಅಷ್ಟು ದೀರ್ಘ ಓದು ನನ್ನದಲ್ಲವಾದ್ದರಿಂದ ನಿಮ್ಮಷ್ಟು ಬರೆಯಾಲಾಗುತ್ತಿಲ್ಲ.

    ಮೊದಲಿನಿಂದಲೂ ಟೀಕಿಸಲೇ ಅರೆಬರೆ ಟೀಕಾಚಾರ್ಯರಿಗೆ ಉತ್ತರ ಕೊಡುವುದು ಕಷ್ಟವೇ. ಬುದ್ದಿವಂತಿಕೆಯ ಸೋಗು ಮತ್ತೆ ಬ್ರಾಹ್ಮಣವನ್ನ ಅಥವಾ ಇಂತಹ ಮಾತು ಬರೆದರೆ ಬರುವಂತಹ "ಸಪ್ಪೋರ್ಟು" ಕಾರಣವಾಗಿರಬಹುದು.

    ರಘು ಅವರೆ, ತುಂಬಾ ಉತ್ತಮವಾದದ್ದು.ನಿಮಗೆ ಮತ್ತೆ ಈ ವಿಚಾರದಲ್ಲಿ ನನ್ನ ಸಂಪೂರ್ಣ ಸಹಮತಿ ಇದೆ.

    ReplyDelete
  2. ರಾಘು ಅವರೆ, ಒಬ್ಬ ವ್ಯಕ್ತಿಯನ್ನು ಬುದ್ಧಿಜೀವಿ ಆಗಲು ಪ್ರಯತ್ನ ಪಡ್ತಾ ಇದೀರಾ ಎಂದಾಕ್ಷಾಣ ಯಾರಾದರೂ ಮಾನನಷ್ಟ ಮೊಕದ್ದಮೆ ಹಾಕ್ತಾರೇನ್ರೀ?? lol.
    ನೋಡಿ ರಾಘು ನನಗೆ ನಿಮ್ಮ ಮೇಲೆ ಯಾವ ವಯುಕ್ತಿಕ ಧ್ವೇಷವಿಲ್ಲ. ಈ ಮೊದಲು ನೀವು ಯಾರಿ ಅಂತಾನೇ ತಿಳಿದಿರಲಿಲ್ಲ. ಸಂಪಾದಕೀಯದಲ್ಲಿ ವ್ಯಕ್ತಗೊಂಡಿರುವುದು ನಮ್ಮ ರಾಜಕೀಯ ನಿಲುವುಗಳಷ್ಟೇ.
    ನೀವು prove ಮಾಡಲು ಯತ್ನಿಸುತ್ತಿರುವಂತೆ ನಾನು ಬ್ರಾಹ್ಮಣ ವಿರೋಧಿಯಲ್ಲ. ಅದನ್ನು ನಾನು ನಿಮ್ಮೆದುರು prove ಮಾಡುವ ಯಾವ ಅಗತ್ಯವೂ ಕಂಡು ಬರುತ್ತಿಲ್ಲ.
    ನೋಡಿ ರಘು, ಸಮಾಜವನ್ನು, ಚರಿತ್ರೆಯನ್ನು ನೋಡುವ, ಅರ್ಥ ಮಾಡಿಕೊಳ್ಳುವು ನಮ್ಮಿಬ್ಬರ ಧೋರಣೆಗಳು ಎಂದೂ ಒಂದುಗೂಡಲ್ಲ ಎನ್ನುವುದು ಇಬ್ಬರಿಗೂ ಅರ್ಥವಾಗಿದೆ.
    ಶಂಕರಾಚಾರ್ಯ ಲಕ್ಷಾಂತರ ಬೌದ್ಧರ ಜೈನರ ನರಹತ್ಯೆಗೆ ಕಾರಣನಾದ ವ್ಯಕ್ತಿ. ಜಗತ್ತು ಮಿಥ್ಯೆ ಎಂದು ಹೇಳಿದ ಆ ಮನುಷ್ಯ(?) ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆಯುವಾಗ ಶೂದ್ರರಿಗೆ ಶಿಕ್ಷಣದ ಹಕ್ಕುನ್ನು ನಿರಾಕರಿಸಿ ಪಕ್ಕಾ ಲೌಕಿಕವಾದಿಯಾಗಿದ್ದನ್ನು ಜಗತ್ತು ಮರೆಯುವುದಿಲ್ಲ.
    ಶಂಕರಾಚಾರ್ಯರನ್ನು ಅರಿತ ಯಾವ ಸೂಕ್ಷ ಮನಸ್ಸಿನ ಬ್ರಾಹ್ಮಣನೂ ಅವನ ಪರವಾಗಿ ನಿಲ್ಲುವುದಿಲ್ಲ.

    ಅಂಬೇಡ್ಕರ್ ಅವರು ಎಂದೂ ಬ್ರಾಹ್ಮಣರ ವಿರೋಧಿಯಾಗಿರಲಿಲ್ಲ. ಆದರೆ ಬ್ರಾಹ್ಮಣ್ಯದ ವಿರೋಧೀಯಾಗಿದ್ದರು. ಬ್ರಾಹ್ಮಣರಾದವರೆಲ್ಲರಿಗೂ ಬ್ರಾಹ್ಮಣ್ಯ ಇರಬೇಕಾಗಿಲ್ಲ. ಬ್ರಾಹ್ಮಣ್ಯ ಬ್ರಾಹ್ಮಣರಿಗೆ ಮಾತ್ರವೇ ಸೀಮಿತವಾದದ್ದಲ್ಲ. ಶೂದ್ರ, ದಲಿತರಲ್ಲಿಯೂ ಇದೆ. ಬ್ರಾಹ್ಮಣ್ಯ ಎಂದರೆ ಏನು ಎಂದು ತಿಳಿಯಬೇಕಾದರೆ ರಾಹುಲ ಸಾಂಕೃತ್ಯಾಯನ ಬರೆದ ವೋಲ್ಗಾ- ಗಂಗಾ ಓದಿ.
    ಈಗಾಗಲೇ ಸಾಕಷ್ಟು ಜಾತಿಗ್ರಸ್ಥವಾಗಿರುವ ಸಮಾಜಕ್ಕೆ ಮತ್ತಷ್ಟು ಜಾತೀಯತೆಯ ವಿಷ ಸೇರಿಸುವುದು ಬೇಡ. ನಮ್ಮ ನಮ್ಮ ನೆಲೆಗಳಲ್ಲಿ ಜಾತಿ-ಮತ ದ ಚೌಕಟ್ಟಿನಿಂದ ಹೊರಬಂದು ಯೋಚಿಸಿ ಅಂತೇ ಕ್ರಿಯೆಗಳಲ್ಲಿ ತೊಡಗಲು ಯತ್ನಿಸೋಣ.

    ನಿಮ್ಧಮೊಂದಿಗೆ ಹಲವಾರು ನಿಲುವುಗಳ ಬಗ್ಗೆ ತೀವ್ರ ಭಿನ್ನಾಭಿಪ್ರಾಯಗಳು ಮುಂದುವರೆಯುತ್ತವೆ. ವಯುಕ್ತಿಕ ಟೀಕೆಗಳನ್ನು ಬಿಟ್ಟು ರಾಜಕೀಯ ಚರ್ಚೆ ಸಾಧ್ಯವಾದರೆ ಮುಂದುವರೆಸೋಣ. ಇಲ್ಲವಾದಲ್ಲಿ ಈ ಚರ್ಚೆಯಿಂದ ಏನೂ ಉಪಯೋಗವಿಲ್ಲ. ಪ್ರತಿಕ್ರಿಯಿಸಿ ನನ್ನ ಮೇಲ್ಗೆ ಲಿಂಕ್ ಕಳಿಸಿದ್ದಕ್ಕೆ ಧನ್ಯವಾದಗಳು
    ಹರ್ಷ ಕುಗ್ವೆ.

    ReplyDelete
  3. ಹಾ.. ಇನ್ನೊಂದು ವಿಷಯ ರಾಘು.. ನೀವು ಹೇಳುವ ಮೊದಲೇ ನಾನು ನನ್ನ ಅನಿಸಕೆಯನ್ನು ಬೆಂಬಲಿಸದ ಬರೆಹಗಳನ್ನೂ ಒದಿದ್ದೆ.
    ಅವನ್ನು ಓದಿದ ಮೇಲೆಯೇ ನನಗೆ ಒಂದು ಸ್ಪಷ್ಟವಾಯಿತು. ಸಸ್ಯಾಹಾರ - ಮಾಂಸಾಹಾರ ಚರ್ಚೆ ಬೇರೆ ದೇಶದಲ್ಲಿ ತುಂಬಾ plain level ನಲ್ಲಿ ನಡೆಯಬಹುದೇನೋ. ಆದರೆ ನಮ್ಮ ದೇಶದಲ್ಲಿ ಹಾಗೆ ಸಾಧ್ಯವಿಲ್ಲ, ನನಗೆ ತಿಳಿಸಿರುವಂತೆ ವಿಜ್ಞಾನಿ Einstien ಕೂಡಾ ಅವರ ಕೊನೆಗಾಲದಲ್ಲಿ ಸಸ್ಯಾಹಾರವನ್ನು ಪ್ರತಿಪಾದಿಸಿದ್ದರು.
    ಸಸ್ಯಾಹಾರದ ಪರವಾದ ಕೆಲವು ವಾದಗಳಲ್ಲಿ ನಾನು ಗಮನಿಸಿದ ಹಾಗೆ ಮಾಂಸಾಹಾರಿಗಳು ತಾಮಸ ಗುಣದವರಾಗಿರುತ್ತಾರೆದಂದೂ, ಅವರಲ್ಲಿ Negative enerdy ಇರುತ್ತದೆಂದೂ ಪ್ರತಿಪಾದಿಸಲಾಗಿದೆ. ಇದನ್ನು ಕಳೆದುಕೊಳ್ಳಲು ಅವರೆಲ್ಲಾ ಪಂಚಗವ್ಯ ಸೇವಿಸಬೇಕೆಂತೆ! ಇದರರ್ಥ ಏನು?
    ಈ ದೇಶದ ಶೇಕಡಾ 95 ರಷ್ಟು ಜನರು ತಾಮಸಗುಣವುಳ್ಳವರೆಂದಾಗುತ್ತದಲ್ಲವೇ? ಅವರೆಲ್ಲರೂ ಮಾಂಸಹಾರ ತ್ಯಜಿಸಿದರೆ ಮಾತ್ರ ಆ ತಮೋಗುಣದಿಂದ ಶುದ್ಧರಾಗುತ್ತಾರೆ, ಇದೆಂತಹ ದುರಹಂಕಾರವಲ್ಲವೇ ರಾಘು??? ನೀವೇ ಯೋಚಿಸಿ.

    ReplyDelete
  4. ಸ೦ಪಾದಕೀಯದವರೂ ಪ್ರತಿಕ್ರಿಯಿಸಿದಾರೆ(ಇಮೇಲ್), ನೀವು ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು. ದಯವಿಟ್ಟು ಪತ್ರಕರ್ತರಾದವರು ಇನ್ನೂ ಜವಾಬ್ದಾರಿಯುತವಾಗಿ ಬರೆಯಬೇಕೆ೦ಬುದು ಎಲ್ಲರೂ ಒಪ್ಪುವ ವಿಚಾರ. ಮಾ೦ಸಾಹಾರ ಮಾಡುವುದು ತಪ್ಪೆ೦ಬ ನಿಲುವು ನನ್ನದಲ್ಲ. ಮಾ೦ಸಾಹಾರಿಗಳ ಅವಹೇಳನವೂ ಸರಿಯಲ್ಲ. ಅದೇರೀತಿ ಸಸ್ಯಾಹಾರಿಗಳ ಅವಹೇಳನವೂ ಸರಿಯಲ್ಲ. ಆದರೆ ಜೀವಮಾನವಿಡೀ ಸಸ್ಯಾಹಾರಿಯಾಗಿ ಇರುವುದು ಬಹಳ ಕಷ್ಟ. ಅವರ ಮೌಲ್ಯವನ್ನು ಗೌರವಿಸಬೇಕು. ಬೌಧ್ಧಜೈನರ ಹತ್ಯೆಯಬಗ್ಗೆ ಕೂಗಾಡುವ ಎಡಪ೦ಥೀಯ "ಇತಿಹಾಸಕಾರರು" ಸನಾತನಧರ್ಮೀಯರ ಹತ್ಯೆ ಬ೦ದಾಗ ತೆಪ್ಪಗಾಗಿಹೋಗುತ್ತಾರೆ. ಬ್ರಾಹ್ಮಣ ವಿರೋಧೀ ಅವಹೇಳನ ಯಾವಮಟ್ಟಕ್ಕಿದೆ ಎ೦ದರೆ ಕೇ೦ದ್ರ ಶಾಲಾ ಪಠ್ಯಗಳಲ್ಲೂ ಬ್ರಾಹ್ಮಣರ ಅವಹೇಳನ ಇದೆ. ಬೇಧಭಾವ ಬ್ರಾಹ್ಮಣರು ಮಾಡಿಯೇ ಇಲ್ಲವೆ೦ದಲ್ಲ ಆದರೆ ಈ ರೀತಿ ಸಮುದಾಯದ್ವೇಷ ಸರಿಯಲ್ಲ (reverse discrimination). ಈ "ಇತಿಹಾಸಕಾರರೇ" ಈ ರೀತಿ ಬೌಧ್ಧರನ್ನು ಕೊ೦ದರೆ೦ಬ ಗೂಬೆಕೂರಿಸುವವರು. ಅದಕ್ಕೇ ಹೇಳಿದ್ದು ಎರಡೂ ಕಡೆಗಳಿ೦ದ ನೋಡಿ ಎ೦ದು. ನೀವು ಪ್ರತಿಕ್ರಿಯಿಸಿದ್ದಾಕ್ಕಾಗಿ ಈ ಬ್ಲಾಗಿನ ಕೆಳಗೆ ಈ ವಾದದ ಬಗ್ಗೆ ವಿವರಣೆ ನೀಡುತ್ತೇನೆ. ಆದರೆ ಮೇಲೆಬರೆದದ್ದನ್ನು ತಿದ್ದುವುದುಸರಿಯಲ್ಲ. ಸ೦ಪಾದಕೀಯದವರು ಇನ್ನೂ ಒ೦ದು ಕಾಮೆ೦ಟ್ ಪ್ರಕಟಿಸಿಲ್ಲ ಅದನ್ನು ಅವರು ಒಪ್ಪಿಕೊಳ್ಳಲೂ ಇಲ್ಲ. ನನ್ನಬಳಿ ಆ ಕಾಮೆ೦ಟ್ ಇದೆ. ಅದನ್ನು ಸಷ್ಟಪಡಿಸುವ ಸಾಧ್ಯತೆ ಕಡಿಮೆ ಅಲ್ಲಿಯವರೆಗೆ ಅವರು ಭ೦ಡರೆ೦ಬ ಮಾತು ನಿಲ್ಲುತ್ತದೆ. ಎಡಪ೦ಥೀಯರ ವಾದ ನೀವು ಮ೦ಡಿಸಬೇಡಿ ಅದನ್ನು ಅವರಿಗೇಬಿಟ್ಟು ಎರಡು ಬಣದ ಅಭಿಪ್ರಾಯವನ್ನು ಸಮತೂಲಿಸಲು ಪ್ರಯತ್ನಿಸಿ. ನಿಮಗೆ ಶುಭವಾಗಲಿ ನಿಮ್ಮಿ೦ದ ಒಳ್ಳೆಯ ಬರಹಗಳು ಬರಲಿ.

    ReplyDelete
  5. ಹಾಗೇ, ನೀವು ತಿಳಿದು ಮಾಡುತ್ತೀರೋ ತಿಳಿಯದೆಯೋ ಗೊತ್ತಿಲ್ಲ, ಆದರೆ ನೀವು ವಿಷಯಾ೦ತರ ಮಾಡುತ್ತೀರಿ. ನಾನು ಸ್ಪಷ್ಟವಾಗಿ ಸಸ್ಯಾಹಾರಕ್ಕಿರುವ ಹಿನ್ನೆಲೆಬಗ್ಗೆ ಮಾತಾಡಿದ್ದು. ಶ೦ಕಾರಾಚಾರ್ಯರ ಉಳಿದ ವಿಷಯ ಮುಖ್ಯವೇ ಆಗಿರಬಹುದಾದರೂ ಈ ವಿಷಯಕ್ಕೆ ಅಪ್ರಸ್ತುತ. ರಾಹುಲರು ಒಬ್ಬ ಬೌಧ್ಧ ಮತಾ೦ತೃತ ಮಾರ್ಕ್ಸಿಸ್ಟ್. ಅವರ ಬರಹ ಓದಿಲ್ಲ ಓದದೇ ಏನೂ ಹೇಳಲಾರೆ. ಆದರೆ ನೀವು ಕೇವಲ, ನಿಮ್ಮ ಭಾಷೆಯಲ್ಲಿಯೇ ಹೇಳುವುದಾದರೆ, ಬ್ರಾಹ್ಮಣ್ಯ ವಿರೋಧಿಗಳ ಬರಹ ಓದಿ ಪ್ರಭಾವಿತರಾದ೦ತಿದೆ. ಕೆಲವು "ಇತಿಹಾಸಕಾರರು" ಯಾವುದೇ ಪುರಾವೆ ಇಲ್ಲದೇ ತಮಗಿಷ್ಟವಾಗುವ ಊಹೆಗಳನ್ನು ಸತ್ಯವೆ೦ದು ಪ್ರಕಟಿಸಿ ಅದನ್ನು ಎಲ್ಲರೂ ಒಪ್ಪಬೇಕೆ೦ದರೆ ಅದು ವೈಜ್ಞಾನಿಕತೆಯಲ್ಲ. "ಶಂಕರಾಚಾರ್ಯ ಲಕ್ಷಾಂತರ ಬೌದ್ಧರ ಜೈನರ ನರಹತ್ಯೆಗೆ ಕಾರಣನಾದ ವ್ಯಕ್ತಿ", ಎ೦ದಿರಿ. ಎಲ್ಲ ಓದನ್ನು ಅಕ್ಷರಸಹ ತೆಗೆದುಕೊಳ್ಳಬಾರದು. ಅದನ್ನು ಬರೆದವರು ಯಾರು, ವಿಷಯ ಎಷ್ಟು ನ೦ಬಿಕೆಗೆ ಅರ್ಹ (Epistamology - called Pramana in Vaisheshika school of thought in India) ಎ೦ದು ನೋಡಿ ವೈಜ್ಞಾನಿಕವಾಗಿ ಅಳೆದು ಒಪ್ಪಬೇಕು. ವೈಜ್ಞಾನಿಕ ವೈಜ್ಞಾನಿಕ ಎ೦ದು ಹೇಳುವ ಬಹಳಜನಕ್ಕೆ ಅದರ ಅರ್ಥ ಗೊತ್ತಿಲ್ಲ. ನಾನೂ ಅದನ್ನು ಕಲಿಯುವ ಮೊದಲು ನನಗೆ ಗೊತ್ತೆ೦ದೇ ತಿಳಿದಿದ್ದೆ! ವೈಜ್ಞಾನಿಕ ಎ೦ದರೇನು ಎ೦ದು ಯಾವುದಾದರೂ ಒಳ್ಳೆಯ ಭೌತ/ರಸಾಯನ/ಜೀವ ಶಾಸ್ತ್ರದ ವಿಜ್ಞಾನಿಗಳಲ್ಲಿ ಕೇಳಿ ನೋಡಿ. ಅವರು ವಿವರಿಸುತ್ತಾರೆ.

    ಆಹಾರಕ್ಕೂ ಭಾವನೆಗಳಿಗೂ ಸ೦ಬ೦ಧವಿದೆ[೧]. ಅದು ತಾಮಸಿಕಾಲ್ಲವೂ ಹೌದೋ ಎ೦ದು ಶೋಧನೆ ಮಾಡಿನೋಡಬೇಕೆ ಹೊರತು ಏನೂ ಓದದೇ ತಳ್ಳಿಹಾಕಬಾರದು. ಹಾಗೆ೦ದಾಕ್ಷಣ ಮಾ೦ಸಾಹಾರ ಕೆಟ್ಟದಾಗಬೇಕಿಲ್ಲ.
    ಬ್ರಾಹ್ಮಣರಲ್ಲಿರುವ ಕೆಟ್ಟದೆಲ್ಲ ಬ್ರಾಹ್ಮಣ್ಯ ಎ೦ದುಕೊ೦ಡ೦ತಿದೆ ನೀವು. ಬ್ರಾಹ್ಮಣ್ಯವನ್ನು ರಾಘವಾ೦ಕ, ಪುಲಿಗೆರೆ ಸೋಮ, ಸರ್ವಜ್ಞ ಮತ್ತೇಕೆ ಆತ್ರೇಯ ಸ್ಮೃತಿಯಲ್ಲೇ ವಿವರಿಸಲಾಗಿದೆ. ಕೆಲವುಮೌಲ್ಯಗಳಿಗಾಗಿ ಬದುಕಿದವರನ್ನು ಅವರ ತಪ್ಪುಗಳಿ೦ದಲೇ ಅಳೆಯಬಾರದು. ಅದು ಸ೦ತುಲಿತ ದೃಷ್ಟಿಯಲ್ಲ. ಬ್ರಾಹ್ಮಣರಿ೦ದ "ಬ್ರಾಹ್ಮಣ್ಯ" ದೂರಮಾಡುವ ಕೆಲಸ ಪತ್ರಕರ್ತರಿಗೆ ಬೇಡ. ವರದಿ ಮಾಡಿದರೆ ಸಾಕು ಅದನ್ನು ವಿಶ್ಲೇಷಿಸುವ ಸಾಮರ್ಥ್ಯ ಜನರಿಗಿದೆ. ಬ್ರಾಹ್ಮಣ್ಯ ಎ೦ದರೆ ಏನು ಎ೦ದು ಓದಿ ತಿಳಿದುಕೊಳ್ಳಿ ನಿಮಗಾಗದ್ದನ್ನೆಲ್ಲ "ಬ್ರಾಹ್ಮಣ್ಯ" ಎನ್ನುತ್ತಾ ಹೊಗಬೇಡಿ. We can go beyond reading propagandist literature of Ambedkar or left liberals.

    [೧] http://www.sciencedirect.com/science/article/pii/S0195666307003364#secx9

    ReplyDelete
  6. nijavaagiyu manushynagi huttidavanige taanu huttida jaatiyannu nindisidare sittu barabaradu. Haage sittu bandare antavanu kanditha manushynaagi alochane maaduva shaktiyannu kaledukondiruttane. Aaga I reethiy charche praarambavaagi baree charcheylle mugiyuttade. Idarinda yaarigu upyogavilla.

    ReplyDelete
  7. ಜಯರಾಮ ಅವ್ರೆ,
    ಅವರರವರ ಜಾತಿಯನ್ನು ಸಮರ್ಥಿಸದೇ ಅವರ ಜಾತಿಯನ್ನೇ ವಿರೋಧಿಸುವವರೇ ಬುದ್ದಿಜೀವಿಗಳೆ೦ಬ ಜೊಳ್ಳು ನ೦ಬಿಕೆ ಬಹಳಜನರಲ್ಲಿದೆ. ಇದನ್ನೇ ಸವಾರಿಮಾಡಿ ಅನೇಕರು ಪ್ರಸಿದ್ದರಾಗಿದ್ದಾರೆ. ವಸ್ತುನಿಷ್ಟತೆ ಎನ್ನುವುದು ಸರಿಯನ್ನಿಸಿದ್ದಕ್ಕೆ ಆಧಾರವಿದ್ದರೆ ಸಮರ್ಥಿಸುವುದು ಇಲ್ಲದಿದ್ದರೆ ವಿರೋಧಿಸುವುದು.

    ReplyDelete

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...