25 May 2020

ಕವಿಸಮಯದ ವಡೆ!

ಕವಿಸಮಯದ ವಡೆ!

ಕವಿ ಮುಸುಕಿ ಕಪ್ಪಾದ ಮೂತಿ-ಗಳಿಗೆ
ನಿಟ್ಟುಸಿರು ಏರುಬ್ಬು ಕಳೆದು ಒರಗಿ ಕಡೆಗೆ
ಚಾ ತರುವ ಚಾರುಲತಾಂಗಿಯಲ್ಲಿ 
ಕಾಫಿ ಕೊಡುವ ಕೋಮಲಾಂಗಿಯಲ್ಲಿ ಕೇಳುವುದು
ಕೊಡೆಕವಿಸಮಯದ ವಡೆ!

13 May 2020

ಶೇಣಿಯವರ ಮಾತಿಗೊಂದು ಉತ್ತರ - ಶ್ರದ್ಧೆ ಮತ್ತು ಬುದ್ಧಿಯನ್ನು ಸಮನ್ವಯಮಾಡಿ ಸಾಧಿಸಿ ತೋರಿಸಿದ ಪರಂಪರೆ ನಮ್ಮದು





Ragu Kattinakere ಈ ನಂಬಿಕೆಯ ವ್ಯವಹಾರಕ್ಕೆ ಭಾರತೀಯ ಸಂಪ್ರದಾಯದಲ್ಲಿ ಮುಖ್ಯ ಸ್ಥಾನ ಇಲ್ಲ. ಬರಿ ನಂಬಿಕೆಯನ್ನೇ ಆಧಾರವಗಿಟ್ಟು ನಮ್ಮ ಪರಂಪರೆ ಇಲ್ಲ. ಪ್ರಮಾಣಾಧಾರಿತ ತರ್ಕ ಮತ್ತು ಅನುಭಾವ ಮಾತ್ರ ಮುಖ್ಯ. ಬುದ್ಧಿ ಮತ್ತು ಶ್ರದ್ಧೆ ಎರಡೂ ಕಲಿಯಲು ಅತ್ಯವಶ್ಯಕ.  ಆದರೆ ನಂಬಿಕೆ ಮತ್ತು ಶ್ರದ್ಧೆಗೂ ಸ್ಥಾನ ಕಲ್ಪಿಸಿರುವುದು ವಿದ್ಯೆ ಕಲಿಯಲು ಮತ್ತು ಅಸಹಿಷ್ಣುತೆ ಮತ್ತು ದ್ವೇಷವನ್ನು ತಡೆಯಲು. ಬೇರೆಯವರ ನಂಬಿಕೆಯನ್ನು ಅಪಹಾಸ್ಯ ಮಾಡುವುದು ಭಾರತೀಯರ ಲೆಕ್ಕದಲ್ಲಿ ಬುದ್ಧಿಯ ಕೆಲಸ ಅಲ್ಲ. ಪ್ರಾಮಾಣಿಕ ವಾದದಮೂಲಕ ಬುದ್ಧಿಯನ್ನು ಉಪಯೋಗಿಸಿ ಯಾವುದೋ ಒಂದು ನಂಬಿಕೆ ತಪ್ಪು ಎಂದು ಸಾಧಿಸಬಹುದು ತೋರಿಸಬಹುದು ತರ್ಕಮಾಡಬಹುದು ಅಷ್ಟೆ. ಶಂಕರರಂತವರು ಮಾಡಿದ್ದು ಅದು. ತಾಳಮದ್ದಲೆಯದು ಪಾತ್ರ ಸಮರ್ಥನೆ ಮಾಡುವ ಸುಳ್ಳುವಾದ.  ಇದು ನಮ್ಮ ಆಚಾರ್ಯರು ಮಾಡಿದ ತರ್ಕಬದ್ಧವಾದ ವಾದಗಳಲ್ಲ. ತಾಳಮದ್ದಲೆಯ ವಾದಗಳಲ್ಲಿ  ಅನೇಕ ತಪ್ಪುಗಳಿರುತ್ತವೆ.  ಇಲ್ಲಿ ಶೇಣಿ ಅವರ ಎರಡನೇ ವಾಖ್ಯ ತಪ್ಪು. ಅದನ್ನು ಅವರು ಯಾವುದೋ ನೆಲೆಯಲ್ಲಿ ಹೇಳಿರಬಹುದು ಆದರೆ "ನಂಬುಗೆಯಲ್ಲಿ ಸಂಶೋಧನೆಗೆ ನೆಲೆಯಿಲ್ಲ" ಎಂಬ ಮಾತಿಗೆ ಶಾಸ್ತ್ರದಲ್ಲಿ ಆಧಾರ ಸಿಕ್ಕದು ಎಂದು ನನ್ನ ತಿಳುವಳಿಕೆ. ಮೊದಲು ನಂಬಿಕೆ ನಂತರ ಸಂಶೋಧನೆ - ಶದ್ಧಾವಾನ್ ಲಬತೆ ಜ್ಞಾನಂ... ಇತ್ಯಾದಿ.  ಹಾಗಾಗಿ ತಾಳಮದ್ದಲೆ ವಾದಗಳನ್ನೇ ನಿಜ ಎಂದು ನಂಬಲಾಗದು. ಒರೆಗೆ ಹಚ್ಚಿ ನೋಡಬೇಕು.

ನಂಬಿಕೆ ಬುದ್ದಿ ಎನ್ನುವ ದ್ವಂದ್ವಕ್ಕೆ ಸಿಕ್ಕಿ ಬೀಳುವವರು ಸಾಧಾರಣ ಅಬ್ರಹಾಮಿಕರ ಯೋಚನಾ ಪದ್ಧತಿಯನ್ನು ತಮ್ಮದಾಗಿಸಿಕೊಂಡವರು. ಅವರು ನಂಬಿಕೆಯ ಒಲವನ್ನೂ ಏತೇಯಿಸ್ಟ್ ಗಳ ಅಬ್ರಹಾಮೀ ವಿರೋಧಿ ಭಾವಗಳನ್ನು ಅಳವಡಿಸಿಕೊಂಡು ಇಂಗ್ಲಿಶ್ ನಲ್ಲಿ ಲಭ್ಯ ಇರುವ ಸಾಹಿತ್ಯ ಓದಿ ಅದನ್ನು ಭಾರತೀಯ ಸಂಪ್ರದಾಯಗಳಿಗೆ ತಪ್ಪಿ ಅಳವಡಿಸಲು ಹೋಗುತ್ತಾರೆ. ದ್ವಂದ್ವ ಔಟ್ಡೇಟೆಡ್! ತಾವು ರ್ಯಾಶನಿಷ್ಟುಗಳು ಎಂದು ಮೆರೆಯುವ ಉದ್ಧೇಶ. ಅದು ಅಪ್ರಸ್ತುತ ಎಂಬುದು ಅರ್ಥವಾಗಲಿ ಎಂದು ಇಲ್ಲಿ ನಾನು ವಿವರಿಸುವ ಪ್ರಯತ್ನ ಮಾಡಿದ್ದೇನೆ. ಶ್ರದ್ಧೆ ಮತ್ತು ಬುದ್ಧಿಯನ್ನು ಸಮನ್ವಯಮಾಡಿ ಸಾಧಿಸಿ ತೋರಿಸಿದ ಪರಂಪರೆ ನಮ್ಮದು.
ರಾಗು ಕಟ್ಟಿನಕೆರೆ



Radhakrishna Kalchar Vitla  ಶೇಣಿಯವರ ಮಾತನ್ನು ಬೇರೊಂದು ರೀತಿಯಲ್ಲೂ ಗ್ರಹಿಸಬಹುದು ಅನಿಸ್ತದೆ..ವೈಚಾರಿಕ ಮನೋಧರ್ಮ(ಬುದ್ಧಿಗೆ ಕೆಲಸ)ಇದು ಇರುವಲ್ಲಿ ಯಾರಿಗೂ ಇತರರ ಮೇಲೆ ಸವಾರಿ ಮಾಡುವುದು ಶಕ್ಯವಿಲ್ಲ.ವೈಚಾರಿಕರ ದೃ಼ಷ್ಟಿಯಲ್ಲಿ ಮಹಾ ಪುರುಷನಾಗುವುದು ಕಷ್ಟ..ಶ್ರದ್ಧೆಯೇ ಪ್ರಧಾನವಾಗಿರುವಲ್ಲಿ (ವಿಚಾರದ ಕೊರತೆ ಇರುವಲ್ಲಿ) ಪ್ರಶ್ನಿಸದೆ ಅನುಸರಿಸುವ ಮನೋಧರ್ಮ ಇರುತ್ತದೆ.ಅಂತಹ ಮಂದಿಯ ಕಣ್ಣಿನಲ್ಲಿ ಮಹಾಪುರುಷನೆನಿಸುವುದು ಸುಲಭ.ಅವರು ಎಲ್ಲವನ್ನು ಶ್ರದ್ಧೆಯಿಂದ ಕಾಣುವುದರಿಂದ ಇವರ ಕುರಿತು ಪ್ರಶ್ನೆಗಳು ಹುಟ್ಟುವುದಿಲ್ಲ..ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ..ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ..ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.


Ragu Kattinakere ಹೌದು ಮೊದಲ ವಾಕ್ಯದ ಅರ್ಥಕ್ಕೆ ಎರಡನೆಯದನ್ನು ಸೀಮಿತಗೊಳಿಸಿದರೆ ಹೌದು. ಇದನ್ನು ಸಾರ್ವತ್ರಿಕವಾಗಿ ಅನ್ವಯಿಸುವಂತಿಲ್ಲ ಎನ್ನುವುದನ್ನು ಹೇಳಬೇಕೆನಿಸಿತು. ಪಾಶ್ಚಾತ್ಯರ ಅರ್ಥವೂ ಅದೆ. ಅಂದರೆ ಅಲ್ಲಿ (ನನಗೆ ಇಲ್ಲಿ) ನಂಬಿಕೆಯೇ ಪ್ರಧಾನ. ಇಲ್ಲಿನ ಮತಗಳಲ್ಲಿ ಅದೇ ಇಂದಿಗೂ ಮುಖ್ಯ. ಇತ್ತೀಚೆಗೆ ಇಲ್ಲಿ ಬಂದ ವಿಜ್ಞಾನ ಮಾತ್ರ ಅದಕ್ಕೆ ಹೊರತು ಎಂಬ ಭಾವ ಇಲ್ಲಿದೆ. Rationalism ತತ್ವವನ್ನು ಬಳಕೆಗೆ ತಂದರು ಎನ್ನುವ ರೆನೇ ಡೆಸ್ಕಾರ್ತೆ ಅವರಂತವರೂ ಕ್ರೈಸ್ತ ವಾದಿಗಳು! ನ್ಯೂಟನ್ ಕೂಡ ಕಟ್ಟಾ ಕ್ರೈಸ್ತ! ಅಂದರೆ ಅವರ ಮೂಲದಲ್ಲಿ ಅಂಧಶ್ರದ್ಧೆಯೂ ಇತ್ತು. ಆದರೆ ನಮ್ಮ ಪರಂಪರೆಯಲ್ಲಿ ಹಾಗಿಲ್ಲ - ಸಾವಿರಾರು ವರ್ಷಗಳಿಂದ ನಮ್ಮ ಸಿದ್ಧಾಂತಗಳು ವಾದ ತರ್ಕವನ್ನೇ ಅವಲಂಬಿಸಿದ್ದು. ತರ್ಕ ಭಾರತದಿಂದಲೇ ಬಂತು ಎಂದು ಹಲವಾರು ಐರೋಪ್ಯ ಚಿಂತಕರು ಒಪ್ಪಿದ್ದರು ಈಗ ಕತೆ ಕಟ್ಟಿ ಬೇರೆ ಹೇಳುತ್ತಿದ್ದಾರೆ. ನಮ್ಮಲ್ಲೂ ನಂಬಿಕೆಯ ತೊಂದರೆ ಇದ್ದರೂ ಅದು ನಮ್ಮ ಮೂಲ ಚಿಂತನೆಯಲ್ಲಿ ಮತ್ತು ನಮ್ಮ ಆಚಾರ್ಯರ ಚಿಂತನೆಗೆ ನಂಬಿಕೆ ಬುನಾದಿ ಅಲ್ಲ ಎಂದು ನೆನಪಿಸೋಣ ಎನ್ನಿಸಿತು. ನಮ್ಮ ದೇಶದಲ್ಲಿ ವಿರೋಧೀಪಂಥ ತಪ್ಪುಗಳನ್ನೆಲ್ಲ ನಮ್ಮ ಪರಂಪರೆಗೆ ಅಂಟಿಸಿ ಪಾಶ್ಚಾತ್ಯರ ಮತಕ್ಕೂ ನಮ್ಮ ಪರಂಪರೆಗೂ ತಳುಕು ಹಾಕಿ ಮಾತಾಡುತ್ತದೆ. ಅಂತಹ ಅಪವಾದಗಳಲ್ಲಿ ಸರಿಯಾದ ಅರ್ಥ ಗ್ರಹಿಕೆ ಇಲ್ಲ ಅದು ವಿಚಾರವಾದವೋ ಪ್ರಮಾಣಿಕತೆಯೋ ಆಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳುವ ಅನ್ನಿಸಿತು. ಸೀಮಿತವಾಗಿ ಹೇಳಿದ ವಿಚಾರವನ್ನು ಸಾರ್ವತ್ರಿಕ ಮಾಡಿ ಅನ್ವಯಿಸಿದರೆ ತಪ್ಪಾದೀತು ಎನ್ನುವುದು ಒಂದಾದರೆ ಇನ್ನು ನಂಬಿಕೆಯನ್ನು ಹಳಿಯುವುದೂ ಸರಿಯಲ್ಲ ಎನ್ನುವುದು ಇನ್ನೊಂದು. ತಾಯಿ ತಂದೆ ಯಾರು ಎನ್ನುವುದರಿಂದ ಆದಿಯಾಗಿ ಹಲವು ವಿಚಾರಗಳಲ್ಲಿ ಮನುಷ್ಯನ ಜೀವನದಲ್ಲಿ ನಂಬಿಕೆ ಬಹಳ ಮುಖ್ಯ. ಕರೆದವರು ಬರುತ್ತಾರೆ, ಹೇಳಿದವರು ಮಾಡುತ್ತಾರೆ ಹೀಗೆ ನಂಬಿಕೆ ವಿಶ್ವಾಸ ಬೇಕು. ಎಲ್ಲವನ್ನೂ ವಿಚಾರದಮೂಲಕ ಬಗೆಹರಿಸಿಕೊಳ್ಳಲೂ ಅಸಾಧ್ಯ. ಇದನ್ನು ಮಿದುಳಿನ ವಿಕಾಸವಾದವೂ ಒಪ್ಪಿದೆ. ನಂಬಿಕೆ ಎಲ್ಲಿ ಒಳ್ಳೆಯದು ಎಲ್ಲಿ ಅತಿಯಾಗುತ್ತದೆ ಎಂಬ ಸಂತುಲನ ಬೇಕು. ನಂಬಿಕೆ ಇದ್ದಲ್ಲಿ ವಿಚಾರವಿಲ್ಲ ಎನ್ನುವುದೂ ಸರಿಯಲ್ಲ. ನಮ್ಮ ವಿಚಾರಕ್ಕೆ ಒಪ್ಪಿದ್ದು ನಮ್ಮ ನಂಬಿಕೆಯಾಗುತ್ತದೆ. ಬೇರೆಯವರ ವಿಚಾರಕ್ಕೆ ಒಪ್ಪಿದ್ದೂ ನಮ್ಮ ನಂಬಿಕೆಯಾಗಬಹುದು. ನಂಬಿಕೆ ಮತ್ತು ತರ್ಕದ ನಡುವೆಯೂ ಸಂತುಲನ ಬೇಕು. ಹಾಗಾಗಿ ಶೇಣಿಯವರ ಮಾತು ಸೀಮಿತ ಅರ್ಥದಲ್ಲಿ ಸರಿ. ಆದರೆ ಅದನ್ನು ಸಾರ್ವತ್ರಿಕವಾಗಿ ಅದರಲ್ಲೂ ನಮ್ಮ ಪುರಾತನರ ಚಿಂತನೆ ಅನ್ವಯಿಸಿದರೆ ತಪ್ಪೆ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಇನ್ನು ನಾನೂ ಹವ್ಯಾಸಿಯಾಗಿ ತಾಳಮದ್ದಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ನನಗಿದೆ. ಆದರೆ ಪಾತ್ರ ಸಮರ್ಥನೆ ಪ್ರಸಂಗದ ಬಂಧಕ್ಕೆ ಒಳಪಟ್ಟ ವಾದಗಳ ಸ್ವರೂಪ ಮತ್ತು ಹಿಂದಿನ ಆಚಾರ್ಯರ ವಾದಗಳ ಸ್ವರೂಪ ಬೇರೆ ಎನ್ನುವುದರಲ್ಲಿ ಡಿಬೇಟ್ ಮತ್ತು ನಮ್ಮ ಆಚಾರ್ಯರ ವಾದ ಬೇರೆ ಎನ್ನುವ ವಿಷಯ ಗಮನಿಸಬೇಕು ಎನ್ನುವ ಕಾರಣಕ್ಕಾಗಿಯೂ ಇದನ್ನು ಉದ್ದ ಬೆಳಸಬೇಕಾಯಿತು. ಉತ್ತರಿಸಿದ್ದಕ್ಕೆ ನಿಮಗೆ, ಅಶೋಕವರ್ಧನರಿಗೆ ವಿಷಯ ಇಲ್ಲಿ ಪ್ರಸಾಪಿಸಿದ್ದಕ್ಕೆ ಧನ್ಯವಾದಗಳು.



01 May 2020

Why should expats teach their mother tongue to their children?

This question does not arise to speakers of English and a few other European languages. This question is mostly asked by some Indians or people who have a sort of inferiority about everything that belongs to them. Some do not even ask but assume that teaching non English/non-European language will actually trouble their kids and that they should "fit-in". Parents and some children assume this in fact is "modernity". i.e abandoning your roots and learnings associated with your people makes you modern!

To put it shortly, my parents put a lot of effort into teaching me more languages: even some languages they could not speak. They made sure I learnt Kannada English Hindi and Sanskrit! If I do not teach my children languages I know that will be huge deception. I should strive to teach them more than I know like my parents did. At the very least I should teach them what I know. Otherwise, as a parent I am cheating my children and snatching the opportunity from them.

The choice is yours! Do you want to teach your children your mother tongue or you would rather cheat them based on your definition of what is "enough". Imagine what would have happened to you if parents decided you did not need what you use today? Teaching less is easy teaching more is hard but good and also an obligation.



ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...